ಇಪ್ಪತ್ತು ಪಾಲಿಟೆಕ್ನಿಕ್ಗಳಲ್ಲಿ ಪ್ರವೇಶಕ್ಕೆ ನಿಷೇಧ
ಬೆಂಗಳೂರು: ರಾಜ್ಯದ 20 ಪಾಲಿಟೆಕ್ನಿಕ್ಗಳನ್ನು ಪ್ರವೇಶ ರಹಿತ ಗುಂಪಿಗೆ ಸೇರಿಸಲಾಗಿದ್ದು, ಈ ಪಾಲಿಟೆಕ್ನಿಕ್ಗಳಲ್ಲಿ ಪ್ರಥಮ ವರ್ಷದ ಡಿಪ್ಲೊಮಾ ತರಗತಿಗೆ ಸೇರದಿರುವಂತೆ ರಾಜ್ಯ ತಾಂತ್ರಿಕ ಶಿಕ್ಷಣ ಇಲಾಖೆ ನಿರ್ದೇಶಕರು ವಿದ್ಯಾರ್ಥಿಗಳಿಗೆ ಸೂಚಿಸಿದ್ದಾರೆ.
ಈ ಸೂಚನೆಯನ್ನು ಧಿಕ್ಕರಿಸಿ ಪ್ರವೇಶ ಪಡೆದಲ್ಲಿ ಮುಂದೆ ಆಗುವ ಅನಾಹುತಗಳಿಗೆ ಇಲಾಖೆ ಜವಾಬ್ದಾರಿಯಲ್ಲ. ಈ ಕೆಳಗಿನ ಪಾಲಿಟೆಕ್ನಿಕ್ಗಳಲ್ಲಿ ಯಾರೂ ಪ್ರವೇಶ ಪಡೆಯಬಾರದು ಎಂದು ಎಂದು ನಿರ್ದೇಶಕರ ಪ್ರಕಟಣೆ ತಿಳಿಸಿದೆ.
ಬೆಂಗಳೂರಿನ ಮೆಹಮೂದ್ ಷರೀಫ್ ಪಾಲಿಟೆಕ್ನಿಕ್, ಎಸ್. ಜೆ. ರೆಡ್ಡಿ, ಎಸ್ಎಲ್ಎಸ್, ನಾಡಗೀರ್ ಹಗಲು ಮತ್ತು ಸಂಜೆ ಕಾಲೇಜು, ಅಮರಗಿರಿ, ಬೆಳಗಾವಿಯ ಎಸ್.ಆರ್. ವೈ. ಡಿ, ಬೀರೂರಿನ ಎಸ್ಜೆಎಂ, ಬಿಜಾಪುರದ ಅಂಜುಮನ್, ಹುಬ್ಬಳ್ಳಿಯ ನಳಂದ, ಧಾರವಾಡದ ಕೆಎಚ್ಕೆ ಸಂಜೆ ಕಾಲೇಜು, ಕೆ. ಎಂ. ದೊಡ್ಡಿಯ ಬಿಇಟಿ, ಮೈಸೂರಿನ ಶ್ರೀಮತ್, ಭದ್ರಾವತಿಯ ಟಿಎಂಎಇ, ಸೊಸೈಟಿ, ದಾಂಡೇಲಿಯ ಎಸ್ಯುಸಿ, ಮೊಲಕಾಲ್ಮೂರಿನ ಪಿಇಎ, ಅರಸೀಕೆರೆಯ ಶ್ರೀ ಚಂದ್ರಶೇಖರ ಭಾರತಿ ರೂರಲ್, ಶಿಡ್ಲಘಟ್ಟದ ಸರ್ ಎಂವಿ, ರಾಂಪುರದ ವಿಜಯನಗರ ವಿದ್ಯಾ ಗಂಗೋತ್ರಿ, ಕಾರವಾರದ ಉಲ್ಗಾದಲ್ಲಿನ ಮಹಾಸತಿ ಪಾಲಿಟೆಕ್ನಿಕ್.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...