ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮಳೆಗೆ ಮೊರೆಯಿಟ್ಟು ಚಾಮುಂಡಿಗೆ ಕೃಷ್ಣ ಪೂಜೆ
ಮೈಸೂರು : ಕಳೆದೆರಡು ವರ್ಷಗಳಿಂದ ರಾಜ್ಯವನ್ನು ಪೀಡಿಸುತ್ತಿರುವ ಬರಗಾಲವನ್ನು ನಿವಾರಿಸುವಂತೆ ಕೋರಿ ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಚಾಮುಂಡಿ ಬೆಟ್ಟದಲ್ಲಿನ ಚಾಮುಂಡೇಶ್ವರಿ ದೇವಿಗೆ ಸಪತ್ನೀಕರಾಗಿ ಪೂಜೆ ಸಲ್ಲಿಸಿದರು.
ರಾಜ್ಯದಲ್ಲಿನ ಬರ ಪರಿಸ್ಥಿತಿಯನ್ನು ನಿವಾರಿಸುವಂತೆ ತಾಯಿ ಚಾಮುಂಡಿಗೆ ಪೂಜೆ ಸಲ್ಲಿಸಿದ್ದೇನೆ. ಇನ್ನು ಕೆಲವೇ ದಿನಗಳಲ್ಲಿ ಉತ್ತಮ ಮಳೆಯಾಗುವ ಆಶಾಭಾವ ಹೊಂದಿದ್ದೇನೆ ಎಂದು ಮೇ27ರ ಮಂಗಳವಾರ ಚಾಮುಂಡಿಗೆ ಪೂಜೆ ಸಲ್ಲಿಸಿದ ನಂತರ ಮುಖ್ಯಮಂತ್ರಿ ಕೃಷ್ಣ ಸುದ್ದಿಗಾರರಿಗೆ ತಿಳಿಸಿದರು.
ಭವ್ಯ ಪರಂಪರೆ ಹೊಂದಿರುವ ಚಾಮುಂಡಿ ದೇಗುಲ ಹಾಗೂ ಸುತ್ತಮುತ್ತಲ ಪ್ರದೇಶದ ಅಭಿವೃದ್ಧಿಗಾಗಿ ಅಗತ್ಯವಾದ ಆರ್ಥಿಕ ನೆರವು ನೀಡುವ ಭರವಸೆಯನ್ನು ಮುಖ್ಯಮಂತ್ರಿ ಕೃಷ್ಣ ನೀಡಿದರು.
(ಇನ್ಫೋ ವಾರ್ತೆ)
ಮುಖಪುಟ / ಕೃಷ್ಣಗಾರುಡಿ
Comments
Story first published: Wednesday, May 28, 2003, 5:30 [IST]