ಸೃಷ್ಟಿ ನೃತ್ಯ ಚಿಕಿತ್ಸಾ ಕೇಂದ್ರದಿಂದ ನೃತ್ಯ ಚಿಕಿತ್ಸಾ ಶಿಬಿರ
ಬೆಂಗಳೂರು : ಮಾಹಿತಿ ತಂತ್ರಜ್ಞರು ಸೇರಿದಂತೆ ಬೊಜ್ಜು, ಆರ್ಥರೈಟಿಸ್, ಮಾನಸಿಕ ಒತ್ತಡ ಮತ್ತಿತರ ತೊಂದರೆಯಿಂದ ಬಳಲುತ್ತಿರುವವರಿಗಾಗಿ ಸೃಷ್ಟಿ ನೃತ್ಯ ಚಿಕಿತ್ಸಾ ಕೇಂದ್ರವು ಜೂ. 5ರಿಂದ ಹತ್ತು ದಿನಗಳ ಕಾಲ ನಗರದ ಅರಮನೆ ಮೈದಾನದಲ್ಲಿ ನೃತ್ಯ ಚಿಕಿತ್ಸಾ ಶಿಬಿರವನ್ನು ಏರ್ಪಡಿಸಲಾಗಿದೆ.
ಶಿಬಿರದಲ್ಲಿ ಡಯಾಬಿಟೀಸ್, ಬೊಜ್ಜು, ರಕ್ತದೊತ್ತಡ ನಿಯಂತ್ರಣ, ಮುಂತಾದ ತೊಂದರೆಗಳನ್ನು ನಿವಾರಿಸಲು ವಿಶೇಷ ಗಮನ ಹರಿಸಲಾಗುತ್ತದೆ. ಸುಲಭ ಪ್ರಸೂತಿಯ ಕುರಿತು ಮಾಹಿತಿ ಒದಗಿಸಲಾಗುವುದು ಎಂದು ಶಿಬಿರದ ಆಯೋಜಕರಲ್ಲೊಬ್ಬರಾದ ಎ. ವಿ. ಸತ್ಯನಾರಾಯಣ ತಿಳಿಸಿದ್ದಾರೆ.
ಶಿಬಿರದಲ್ಲಿ ಆಯಾ ತೊಂದರೆಗಳಿಗೆ ತಕ್ಕಂತೆ ನೃತ್ಯ ಚಲನೆ ಮಾಡಲಾಗುವುದು. ಈ ನೃತ್ಯ ಚಿಕಿತ್ಸೆಯಲ್ಲಿ ಭರತ ನಾಟ್ಯ, ಕಥಕ್, ಯೋಗ, ಜಾನಪದ ಮತ್ತು ಸೃಜನಾತ್ಮಕ ಕಲೆಗಳ ಮೂಲಾಂಶಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಗಂಭೀರ ಸ್ವರೂಪದ ಹೃದ್ರೋಗಿಗಳು ಮತ್ತು ಮಧು ಮೇಹಿಗಳಿಗೆ ಈ ಚಿಕಿತ್ಸೆ ನೀಡಲಾಗುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 080- 2219145, 9448084855.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...