For Daily Alerts
ಕೂಡಲಸಂಗಮ ಸಮಾವೇಶಕ್ಕೆ1500 ಧರ್ಮಗುರುಗಳು
ಬೆಂಗಳೂರು : ಜೂನ್ ಒಂದರಿಂದ ನಾಡಿನ ಐತಿಹಾಸಿಕ ಕೇಂದ್ರ ಕೂಡಲ ಸಂಗಮದಲ್ಲಿ ನಡೆಯುವ ವೀರಶೈವ- ಲಿಂಗಾಯತ ಮಹಾಗುರುಗಳ ಧರ್ಮ ಸಮ್ಮೇಳನಕ್ಕೆ ಸಿದ್ಧತೆಗಳು ಭರದಿಂದ ಸಾಗಿವೆ.
ದೇಶಾದ್ಯಂತ 1, 500 ಮಂದಿ ಧರ್ಮ ಗುರುಗಳು ಮಹಾಧಿವೇಶನಕ್ಕೆ ಆಗಮಿಸಲಿದ್ದು, ಅಧಿವೇಶನದ ನೇತೃತ್ವವನ್ನು ಸಿದ್ಧಗಂಗೆಯ ಶಿವಕುಮಾರ ಸ್ವಾಮೀಜಿ ವಹಿಸುವರು. ಸೈದ್ಧಾಂತಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಉಜ್ವಲ ಪರಂಪರೆ ಹೊಂದಿರುವ ವೀರಶೈವ ಲಿಂಗಾಯತರಲ್ಲಿ ಕಾರಣಾಂತರಗಳಿಂದ ಸಾಮಾಜಿಕ ಸಂಬಂಧಗಳು ಶಿಥಿಲಗೊಳ್ಳುತ್ತಿರುವುದನ್ನು ಗಮನಿಸಿ ಈ ಅಧಿವೇಶನವನ್ನು ಆಯೋಜಿಸಲಾಗಿದೆ.
ಸಮಾವೇಶದಲ್ಲಿ ಭಾಗವಹಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ವೀರಣ್ಣ ಚರಂತಿ ಮಠ, ಕಾರ್ಯಾಧ್ಯಕ್ಷರು ಬಸವೇಶ್ವರ ವಿದ್ಯಾವರ್ಧಕ ಸಂಸ್ಥೆ, ಬಾಗಲಕೋಟೆ. ದೂರವಾಣಿ- 08354- 420187. ಮೊಬೈಲ್ - 98452-25757.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...
Story first published: Saturday, May 24, 2003, 5:30 [IST]