ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬೆಂಗಳೂರಿನ ಮೌಂಟ್ಜಾಯ್ ರಸ್ತೆಗೆ ವೈಯೆನ್ಕೆ ಹೆಸರು
ಬೆಂಗಳೂರು: ಬೆಂಗಳೂರು ಮಹಾನಗರ ಪಾಲಿಕೆಯ ಕೆಂಪೇಗೌಡ ನಗರ ವಾರ್ಡ್ ವ್ಯಾಪ್ತಿಯಲ್ಲಿ ಬರುವ ಮೌಂಟ್ ಜಾಯ್ ರಸ್ತೆಗೆ ಹಿರಿಯ ಪತ್ರಕರ್ತ ದಿವಂಗತ ವೈ.ಎನ್.ಕೃಷ್ಣಮೂರ್ತಿ (ವೈಯೆನ್ಕೆ) ಅವರ ಹೆಸರಿಡಲು ಪಾಲಿಕೆ ನಿರ್ಧರಿಸಿದೆ.
ಮೌಂಟ್ ಜಾಯ್ ರಸ್ತೆಗೆ ವೈಯೆನ್ಕೆ ಅವರ ಹೆಸರಿಡುವ ಕಾರ್ಯಕ್ರಮವನ್ನು ಮೇ ತಿಂಗಳಂತ್ಯದ ವೇಳೆಗೆ ಆಯೋಜಿಸಲಾಗುವುದು ಎಂದು ಕೆಂಪೇಗೌಡ ನಗರ ವಾರ್ಡ್ನ ಕಾರ್ಪೋರೇಟರ್ ಗೀತಾ ಸದಾಶಿವ ತಿಳಿಸಿದ್ದಾರೆ.
ಕಳೆದ ಅಕ್ಟೋಬರ್ ತಿಂಗಳಿನಲ್ಲಿ ನಡೆದ ಪಾಲಿಕೆ ಸಭೆಯಲ್ಲಿ ಮೌಂಟ್ ಜಾಯ್ ರಸ್ತೆಗೆ ವೈಯೆನ್ಕೆ ಹೆಸರಿಡಲು ನಿರ್ಧಾರ ಕೈಗೊಳ್ಳಲಾಗಿತ್ತು . ಈ ಪ್ರಸ್ತಾಪವನೆಯನ್ನು ಸರಕಾರ ಕೂಡ ಅಂಗೀಕರಿಸಿದೆ. ರಸ್ತೆ ನಾಮಕರಣ ಕಾರ್ಯಕ್ರಮಕ್ಕೆ ಖ್ಯಾತ ಸಾಹಿತಿ ಹಾಗೂ ಜ್ಞಾನಪೀಠ ಪ್ರಶಸ್ತಿ ವಿಜೇತ ಲೇಖಕ ಡಾ. ಯು. ಆರ್. ಅನಂತ ಮೂರ್ತಿಯವರನ್ನು ಆಹ್ವಾನಿಸಲಾಗುವುದು ಎಂದು ಗೀತಾ ಸದಾಶಿವ ಹೇಳಿದರು.
(ಇನ್ಫೋ ವಾರ್ತೆ)
ವಾರ್ತಾ
ಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...
Comments
Story first published: Saturday, May 17, 2003, 5:30 [IST]