ಚಿತ್ರಮಂದಿರಕ್ಕೆ ಮುತ್ತಿಗೆ; ತಮಿಳು ಪೋಸ್ಟ್ರ್ಗೆ ಬೆಂಕಿ
ಬೆಂಗಳೂರು : ತಮಿಳು ಹಾಗೂ ಕನ್ನಡ ಅಭಿಮಾನಿಗಳ ತಿಕ್ಕಾಟ ಮುಂದುವರಿದಿದ್ದು , ನಗರದ ಮಾಗಡಿ ರಸ್ತೆಯ ಅಂಜನ್ ಚಿತ್ರ ಮಂದಿರಕ್ಕೆ ಮುತ್ತಿಗೆ ಹಾಕಿದ ಕನ್ನಡ ರಕ್ಷಣಾ ಸಮಿತಿ ವೇದಿಕೆ ಕಾರ್ಯಕರ್ತರು ತಮಿಳು ಚಿತ್ರದ ಭಿತ್ತಿಪತ್ರಗಳನ್ನು ಸುಟ್ಟುಹಾಕಿದರು.
ಅಂಜನ್ ಚಿತ್ರಮಂದಿರಕ್ಕೆ ಶುಕ್ರವಾರ ಬೆಳಗ್ಗೆ ಏಕಾಏಕಿ ಮುತ್ತಿಗೆ ಹಾಕಿದ ಕನ್ನಡ ಚಳವಳಿ ಕಾರ್ಯಕರ್ತರು, ಅಂಜನ್ ಚಿತ್ರಮಂದಿರದಲ್ಲಿ ತಮಿಳು ಚಿತ್ರ ಪ್ರದರ್ಶನವನ್ನು ವಿರೋಧಿಸಿದರು. ಚಿತ್ರಮಂದಿರದ ಮುಂದೆ ಇದ್ದ ತಮಿಳು ಚಿತ್ರದ ಪೋಸ್ಟರ್ ಹಾಗೂ ಬ್ಯಾನರ್ಗಳನ್ನು ಪ್ರದರ್ಶನಕಾರರು ಸುಟ್ಟರು.
ತಮಿಳು ಚಿತ್ರದ ಪೋಸ್ಟರ್ಗಳನ್ನು ಸುಟ್ಟಿದ್ದರಿಂದ ಅಂಜನ್ ಚಿತ್ರ ಮಂದಿರದ ಬಳಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು . ಸಕಾಲಕ್ಕೆ ಮಧ್ಯ ಪ್ರವೇಶಿಸಿದ ಕೆ.ಪಿ.ಅಗ್ರಹಾರ ಪೊಲೀಸರು ಪ್ರತಿಭಟನಕಾರರ ಮನವೊಲಿಸಿ, ಪ್ರದರ್ಶನಕಾರರನ್ನು ಚಿತ್ರಮಂದಿರದ ಆವರಣದಿಂದ ಹೊರಗೆ ಕಳುಹಿಸುವಲ್ಲಿ ಯಶಸ್ವಿಯಾದರು.
ಕನ್ನಡ ಬಾವುಟವನ್ನು ಕೆಲವು ಕಿಡಿಗೇಡಿಗಳು ಸುಟ್ಟ ಪ್ರಕರಣ ಬೆಂಗಳೂರಿನ ಶ್ರೀರಾಮಪುರದಲ್ಲಿ ಇತ್ತೀಚೆಗೆ ನಡೆದಿದ್ದು , ಈ ಪ್ರಕರಣ ಭಾಷಾ ಸೌಹಾರ್ದವನ್ನು ಕದಡಿತ್ತು .
(ಇನ್ಫೋ ವಾರ್ತೆ)
ವಾರ್ತಾ
ಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...