ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮೈಸೂರಿನಲ್ಲಿ ರಂಗಾಯಣದ‘ಗ್ರೀಷ್ಮ ರಂಗೋತ್ಸವ’
ಮೈಸೂರು : ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರನ್ನು ನೆಲೆಯಾಗುಳ್ಳ ರಂಗಾಯಣ ಮೇ ತಿಂಗಳ 17 ರಿಂದ ‘ಗ್ರೀಷ್ಮ ರಂಗೋತ್ಸವ’ ಹಮ್ಮಿಕೊಂಡಿದೆ.
ಹವ್ಯಾಸಿ ಕಲಾವಿದರನ್ನು ಕರೆಸಿ ಪ್ರದರ್ಶನ ನೀಡುವ ಹಿನ್ನೆಲೆಯಲ್ಲಿ ಗ್ರೀಷ್ಮ ರಂಗೋತ್ಸವ ಏರ್ಪಡಿಸಲಾಗಿದೆ. ರಂಗಾಯಣದ ಕಲಾವಿದರಿಗೆ ವಾರಾಂತ್ಯದ ರಜೆ ಇದ್ದಾಗ ಪ್ರದರ್ಶನಗಳನ್ನು ನಿಲ್ಲಿಸುವ ಬದಲು, ಹವ್ಯಾಸಿ ಕಲಾವಿದರಿಂದ ಈ ರೀತಿಯ ಪ್ರದರ್ಶನಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ರಂಗಾಯಣದ ನಿರ್ದೇಶಕ ಪ್ರಸನ್ನ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಎಂ.ಎಸ್. ಸತ್ಯು, ಬಿ.ಜಯಶ್ರೀ, ಟಿ.ಎನ್. ನರಸಿಂಹನ್ ಮುಂತಾದ ಖ್ಯಾತ ನಿರ್ದೇಶಕರ ನಾಟಕಗಳು ಗ್ರೀಷ್ಮ ರಂಗೋತ್ಸವದಲ್ಲಿ ಪ್ರದರ್ಶನ ಕಾಣಲಿವೆ.
ಪ್ರದರ್ಶನಗೊಳ್ಳಲಿರುವ ನಾಟಕಗಳು :
ಸುಳಿಯಲ್ಲಿ ಸಿಕ್ಕವರು, ಹೇಮಂತ, ತೋಟದ ಮನೆ, ಆಷಾಢದ ಒಂದು ದಿನ, ಉರಿಯ ಉಯ್ಯಾಲೆ, ಬಣ್ಣದ ಬದುಕಿನ ಚಿನ್ನದ ಹಾಡುಗಳು, ಹಾವು-ಏಣಿ ಹಾಗೂ ಟಿ.ಪಿ.ಕೈಲಾಸಂ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...
Comments
Story first published: Friday, May 16, 2003, 5:30 [IST]