ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಳ್ಯ:ಗಾಳಿಮಳೆ ಆಟಾಟೋಪಕ್ಕೆ ತೋಟ ಗೋವಿಂದ

By Staff
|
Google Oneindia Kannada News

ಸುಳ್ಯ : ತಾಲ್ಲೂಕಿನಾದ್ಯಂತ ಬಿರುಗಾಳಿ ಹಾಗೂ ಮಳೆಗೆ ಅನೇಕ ತೋಟಗಳು ಭಾಗಶಃ ಹಾನಿಯಾಗಿದ್ದು, ಕೆಲವು ಮನೆಗಳು ಬಿದ್ದು ಹೋಗಿವೆ.

ಮರ್ಕಂಜ, ಸಂಪಾಜೆ, ಗುತ್ತಿಗಾರು, ಕಲ್ಲುಗುಂಡಿ, ಉರಡ್ಕ, ದುಗ್ಗಲಡ್ಕ, ಅಜ್ಜಾವರ, ಚೊಕ್ಕಾಡಿ, ಜಾಲ್ಸೂರು, ಅರಂತೋಡು ಹಾಗೂ ಕನಕಮಜಲುಗಳ ಕೃಷಿಕರು ಮೊದಲೇ ಬೆಲೆ ಕುಸಿತದಿಂದ ಕಂಗಾಲಾಗಿದ್ದರು. ವಿಪರೀತ ಬಿರುಗಾಳಿ ಹಾಗೂ ಜೋರು ಮಳೆಯ ಕಾರಣ ಈಗ ಬೆಳೆ ಕೂಡ ನಾಶವಾಗಿದೆ.

ದುಗ್ಗಲಡ್ಕದಲ್ಲಿ ಅನೇಕರ ಅಡಿಕೆ ತೋಟಗಳು ಹಾಳಾಗಿದ್ದು, ಸಾಕಷ್ಟು ನಷ್ಟ ಅನುಭವಿಸಬೇಕಾಗಿದೆ. ಇದೇ ಊರಿನ ಟಾಕೀಸೊಂದರ ಮೇಲೆ ಎರಡು ಮರಗಳು ಬಿದ್ದು ಸ್ಲಾಬ್‌ ಜಖಂಗೊಂಡಿದೆ. ಊರಿನ ಹೈಸ್ಕೂಲು ಹಾಗೂ ಅಂಗನವಾಡಿಯ ಹೆಂಚುಗಳು ಹಾರಿಹೋಗಿವೆ. ಅನೇಕ ವಿದ್ಯುತ್‌ ಕಂಬಗಳು ಉರುಳಿ ಬಿದ್ದಿರುವ ಕಾರಣ ಇನ್ನು ಕೆಲವು ದಿನ ಊರಲ್ಲಿ ವಿದ್ಯುತ್‌ ಪೂರೈಕೆ ಇರುವುದಿಲ್ಲ ಎಂದು ಸ್ಥಳೀಯ ಆಡಳಿತ ವರದಿ ಮಾಡಿದೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X