ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಉ. ಕ. ಅಭಿವೃದ್ಧಿಗಾಗಿ ಹೊಸ ಕಾರ್ಯಪಡೆ ರಚನೆ
ಬೆಂಗಳೂರು: ಉತ್ತರ ಕರ್ನಾಟಕದ ಧಾರವಾಡ, ಬೆಳಗಾವಿ, ಗದಗ ಜಿಲ್ಲೆಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವುದಕ್ಕಾಗಿ ಸರಕಾರ ಉತ್ತರ ಕರ್ನಾಟಕ ಕಾರ್ಯಪಡೆ ರಚಿಸಿದೆ.
ಉತ್ತರ ಕರ್ನಾಟಕದ ಮೂರು ಜಿಲ್ಲೆಗಳ ಆರ್ಥಿಕ ಹಾಗೂ ವಾಣಿಜ್ಯ ಬೆಳವಣಿಗೆಗಳಿಗೆ ಪೂರಕವಾಗಿ ಈ ಯೋಜನೆಯನ್ನು ಹಮ್ಮಿಕೊಳ್ಳಲಾಗಿದ್ದು ಬೆಂಗಳೂರು ಅಜೆಂಡಾ ಟಾಸ್ಕ್ ಫೋರ್ಸ್ ಮಾದರಿಯಲ್ಲಿಯೇ ಈ ಕಾರ್ಯಪಡೆಯೂ ಕೆಲಸ ನಿರ್ವಹಿಸಲಿದೆ.
ಈ ಯೋಜನೆಯ ಅನ್ವಯ ಮೊದಲ ಹಂತದಲ್ಲಿ ಹುಬ್ಬಳ್ಳಿ ಗೋಕುಲ್ ಕ್ರಾಸ್ನಿಂದ ತಾರಿಹಾಳ್ ವರೆಗೆ 8. 4 ಕಿ.ಮಿ. ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗುವುದು. ಬೆಳಗಾವಿಯಲ್ಲಿ ವಿಮಾನ ನಿಲ್ದಾಣ, ಹುಬ್ಬಳ್ಳಿಯಲ್ಲಿ ವಸ್ತು ಪ್ರದರ್ಶನ ಮಳಿಗೆ ಆರಂಭ ಕೂಡ ಕಾರ್ಯಪಡೆಯ ಮುಂದಿರುವ ಯೋಜನೆ.
ಧಾರವಾಡ ಬೆಳಗಾವಿ ಮತ್ತು ಗದಗದ ಜಿಲ್ಲಾಧಿಕಾರಿಗಳು, ಕ್ಷೇಮ ಟೆಕ್ನಾಲಜೀಸ್ನ ಮುಖ್ಯ ತಾಂತ್ರಿಕ ಅಧಿಕಾರಿ ಪಿ. ವಿ. ದೇಶಪಾಂಡೆ ಈ ಕಾರ್ಯಪಡೆಯ ಸದಸ್ಯರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...
Comments
Story first published: Saturday, May 10, 2003, 5:30 [IST]