ಫೋನ್ ದರ ಏರಿಕೆ ಪ್ರಶ್ನಿಸಿ ಗ್ರಾಹಕ ವೇದಿಕೆ ಕೋರ್ಟಿಗೆ
ಮಂಗಳೂರು: ಬಿಎಸ್ಎನೆಲ್ ದೂರವಾಣಿ ಕರೆಗಳ ದರವನ್ನು ಹಿಗ್ಗಾಮುಗ್ಗಾ ಏರಿಸಿರುವುದನ್ನು ವಿರೋಧಿಸಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಗ್ರಾಹಕ ವೇದಿಕೆ ಕೋರ್ಟಿಗೆ ಹೋಗಲು ನಿರ್ಧರಿಸಿದೆ.
ವೇದಿಕೆಯು, ಬಿಎಸ್ಸೆನ್ನೆಲ್ನ ದರ ಏರಿಕೆ ಕ್ರಮವನ್ನು ಕೋರ್ಟಿನಲ್ಲಿ ಪ್ರಶ್ನಿಸಲಿದೆ ಹಾಗೂ ಇತರ ಮಾದರಿಯಲ್ಲಿ ದರ ಏರಿಕೆಯನ್ನು ವಿರೋಧಿಸಿ ಪ್ರತಿಭಟನೆಗಳನ್ನು ನಡೆಸಲಿದೆ ಎಂದು ಗ್ರಾಹಕ ವೇದಿಕೆಯ ಸಂಯೋಜಕ ದಿನೇಶ್ ಹೆಗಡೆ ಉಳಿಪಾಡಿ ತಿಳಿಸಿದ್ದಾರೆ.
ಗ್ರಾಮೀಣ ಪ್ರದೇಶದವರಿಗೂ ಟೆಲಿಫೋನ್ ಸೌಲಭ್ಯ ತಲುಪಲಿ ಎಂಬ ಕಾರಣಕ್ಕಾಗಿಯೇ ಈ ಹಿಂದೆ ಬಿಎಸ್ಸೆನ್ನೆಲ್ ದೂರವಾಣಿ ಕರೆಗಳ ದರವನ್ನು ಅಗ್ಗವಾಗಿಸಿತ್ತು. ಉಚಿತ ಕರೆಗಳ ಸಂಖ್ಯೆಯನ್ನು ಹೆಚ್ಚಿಸಿತ್ತು. ದೂರವಾಣಿ ಅಗ್ಗವಾಗಿರುವುದನ್ನು ಮನಗಂಡು ಫೋನ್ ಸಂಪರ್ಕ ಹಾಕಿಸಿಕೊಂಡ ಗ್ರಾಮೀಣ ಪ್ರದೇಶದ ನಿವಾಸಿಗಳಿಗೆ ಇತ್ತೀಚೆಗಿನ ದರ ಏರಿಕೆ ಪ್ರಕ್ರಿಯೆಯಿಂದ ತೀರಾ ತೊಂದರೆಯಾಗಿದೆ. ಬಿಎಸ್ಸೆನ್ನೆಲ್ ಗ್ರಾಮೀಣ ಪ್ರದೇಶದವರ ನೆಮ್ಮದಿಯ ಮೇಲೆ ಸವಾರಿ ಮಾಡುತ್ತಿದೆ ಎಂದು ದಿನೇಶ್ ದೂರಿದ್ದಾರೆ.
ಪ್ರತಿಭಟನೆಯ ರೂಪವಾಗಿ, ದೂರವಾಣಿಗಳ ಸಂಪರ್ಕವನ್ನು ದೊಡ್ಡ ಪ್ರಮಾಣದಲ್ಲಿ ವಾಪಾಸು ಮಾಡಲಾಗುವುದು, ಖಾಸಗಿ ಟೆಲಿಫೋನ್ಕಂಪೆನಿಗಳ ಜೊತೆಗೆ ಕಡಿಮೆ ಬೆಲೆಗೆ ಮೂಲಭೂತ ಸೌಕರ್ಯಕ್ಕೋಟೆಲಿಫೋನ್ ಸಂಪರ್ಕ ಕಲ್ಪಿಸುವಂತೆ ಕೋರಲಾಗುವುದು. ಅಲ್ಲದೆ ಬಿಎಸ್ಸೆನ್ನೆಲ್ ಕ್ರಮವನ್ನು ಕೋರ್ಟಿನಲ್ಲಿ ಪ್ರಶ್ನಿಸಲಾಗುವುದು ಎಂದು ದಿನೇಶ್ ಹೇಳಿದರು. ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವವರು ದಿನೇಶ್ ಅವರನ್ನು ಸಂಪರ್ಕಿಸಬಹುದು: 0824- 2420242
(ಇನ್ಫೋ ವಾರ್ತೆ)
ವಾರ್ತಾ
ಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...