ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ನೈಋತ್ಯ ರೈಲ್ವೆ ವಲಯಕ್ಕೆ ಬಳ್ಳಾರಿ, ತೋರಣಗಲ್
ಹುಬ್ಬಳ್ಳಿ : ಬಳ್ಳಾರಿ, ತೋರಣಗಲ್, ರಣಜಿತ್ಪುರ ಪ್ರದೇಶಗಳನ್ನು ನೈಋತ್ಯ ರೈಲ್ವೆ ವಲಯಕ್ಕೆ ಸೇರಿಸಿ ಕೇಂದ್ರ ಸರಕಾರ ಹೊರಡಿಸಿರುವ ಅಧಿಸೂಚನೆ ಇನ್ನೆರಡು ದಿನಗಳಲ್ಲಿ ಅಧಿಕೃತವಾಗಿ ಜಾರಿಗೆ ಬರಲಿದೆ.
ಕೇಂದ್ರ ಸಚಿವ ಬಸನಗೌಡ ಪಾಟೀಲ ಯತ್ನಾಳ್ ಅವರು ಸಂಸದ ವಿಜಯ ಸಂಕೇಶ್ವರ ಅವರಿಗೆ ಕೇಂದ್ರದ ಈ ನಿರ್ಧಾರವನ್ನು ವಿಜಯ ಸಂಕೇಶ್ವರ ಅವರಿಗೆ ತಿಳಿಸಿದ್ದು, ಬುಧವಾರ ನಡೆದ 18 ಗಂಟೆಗಳ ರೈಲು ತಡೆ ಪ್ರತಿಭಟನೆಗೆ ಸಂದ ಪ್ರತಿಫಲ ಇದಾಗಿದೆ.
ಡಾ. ಪಾಟೀಲ ಪುಟ್ಟಪ್ಪ ಮತ್ತು ಸಂಸದ ವಿಜಯ ಸಂಕೇಶ್ವರ ಅವರ ನೇತೃತ್ವದ ಐತಿಹಾಸಿಕ ಹೋರಾಟಕ್ಕೆ ಕೇಂದ್ರಸರಕಾರ ನೀಡಿದ ತಕ್ಷಣವೇ ಭರವಸೆ ನೀಡಿದೆ.
ಆದರೂ, ಕೇಂದ್ರ ಸಚಿವ ಅನಂತ ಕುಮಾರ್ ಅವರು, ಮೇ 10ರ ಶನಿವಾರ ಹುಬ್ಬಳ್ಳಿಗೆ ಬರುವ ಮೊದಲು ಈ ಎಲ್ಲ ಪ್ರದೇಶಗಳು ನೈಋತ್ಯ ವಲಯಕ್ಕೆ ಸೇರ್ಪಡೆಯಾಗದಿದ್ದಲ್ಲಿ ಅವರ ವಿರುದ್ಧ ಕಪ್ಪು ಬಾವುಟ ಪ್ರದರ್ಶಿಸುವ ಘೋಷಣೆ ಅಚಲ ಎಂದು ಸಂಕೇಶ್ವರ ತಮ್ಮ ಹೋರಾಟದ ಪಟ್ಟು ಸಡಿಲಿಸದೇ ಹೇಳಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...
Comments
Story first published: Friday, May 9, 2003, 5:30 [IST]