ಗ್ರಾಮೀಣ ಕೃಪಾಂಕ ಆಧಾರಿತ ನೇಮಕ ಅಸಿಂಧು
ಬೆಂಗಳೂರು: ರಾಜ್ಯದ ನ್ಯಾಯಾಂಗ ಇಲಾಖೆ ಮತ್ತು ಪೊಲೀಸ್ ಇಲಾಖೆಯಲ್ಲಿನ ಗ್ರಾಮೀಣ ಕೃಪಾಂಕ ಆಧಾರಿತ ನೇಮಕವನ್ನು ಅನೂರ್ಜಿತಗೊಳಿಸಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದ್ದು 15 ಸಾವಿರ ಮಂದಿ ನೌಕರರು ಕೆಲಸ ಕಳೆದುಕೊಳ್ಳಲಿದ್ದಾರೆ.
ನ್ಯಾಯಮೂರ್ತಿ ರುಮಾಪಾಲ್ ಮತ್ತು ನ್ಯಾಯಮೂರ್ತಿ ಶ್ರೀಕೃಷ್ಣ ಅವರನ್ನೊಳಗೊಂಡ ನ್ಯಾಯಪೀಠ ಕೃಪಾಂಕ ಆಧಾರಿತ ನೌಕರರನ್ನು ನಾಲ್ಕು ವಾರದೊಳಗೆ ಸೇವೆಯಿಂದ ವಿಮುಕ್ತಿಗೊಳಿಸುವಂತೆ ರಾಜ್ಯಸರಕಾರಕ್ಕೆ ಕಟ್ಟುನಿಟ್ಟಾಗಿ ಕೋರ್ಟ್ ಆದೇಶಿಸಿದೆ.
ಕೃಪಾಂಕ ಆಧಾರಿತ ನೇಮಕವನ್ನು ಪ್ರಶ್ನಿಸಿ ರಾಜೇಶ್ ಹಾಗೂ ಇತರರು ಸುಪ್ರಿಂ ಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಅರ್ಜಿದಾರರ ವಾದವನ್ನು ಪುರಸ್ಕರಿಸಿ 11.10.2000ದಂದು ನ್ಯಾಯಪೀಠ ಕೃಪಾಂಕ ಆಧಾರಿತ ನೇಮಕವನ್ನು ತಿರಸ್ಕರಿಸಿ ತೀರ್ಪು ನೀಡಿತ್ತು. ಮಂಗಳವಾರ ರುಮಾಪಾಲ್ ಅವರನ್ನೊಳಗೊಂಡ ನ್ಯಾಯಪೀಠ ಹಿಂದಿನ ತೀರ್ಪನ್ನು ಸಮರ್ಥಿಸಿದೆ.
ಸುಪ್ರಿಂ ಕೋರ್ಟ್ನ ಈ ತೀರ್ಪಿನ ಹಿನ್ನೆಲೆಯಲ್ಲಿ ಮೇ 11ರ ಭಾನುವಾರ ಕೃಪಾಂಕ ನೌಕರರ ಸಭೆ ಕರೆಯಲಾಗಿದೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...