ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಪ್ರೆಸ್ ಕ್ಲಬ್ ಅಧ್ಯಕ್ಷರಾಗಿ ಅರಕೆರೆ ಜಯರಾಂ
ಬೆಂಗಳೂರು : ‘ದ ಹಿಂದೂ’ ಪತ್ರಿಕೆಯ ಪತ್ರಕರ್ತ ಅರಕೆರೆ ಜಯರಾಂ ಹಾಗೂ ಲಂಕೇಶ್ ಪತ್ರಿಕೆಯ ಸಿನಿಮಾ ವರದಿಗಾರ ಕೆ. ಸದಾಶಿವ ಶೆಣೈ ಕ್ರಮವಾಗಿ ಬೆಂಗಳೂರು ಪ್ರೆಸ್ ಕ್ಲಬ್ನ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ.
2003- 04ನೇ ಇಸವಿಯ ಅವಧಿಯಲ್ಲಿ ಗಾದಿಗಳ ಆಯ್ಕೆಯಾಗಿ ಭಾನುವಾರ (ಮೆ.4) ನಡೆದ ಚುನಾವಣೆಯಲ್ಲಿ ಈ ಫಲಿತಾಂಶ ಬಂದಿರುವುದಾಗಿ ಪ್ರೆಸ್ ಕ್ಲಬ್ ಪ್ರಕಟಿಸಿದೆ.
ಪ್ರೆಸ್
ಕ್ಲಬ್ನ
ಇತರೆ
ಹುದ್ದೆಗಳಿಗೆ
ಆಯ್ಕೆಯಾದವರು-
ಎಂ.ಎ.ಪೊನ್ನಪ್ಪ-
ಪ್ರಧಾನ
ಕಾರ್ಯದರ್ಶಿ
(ಪ್ರಜಾವಾಣಿ)
ಎಸ್.ಶಾಂತಾರಾಂ-
ಕಾರ್ಯದರ್ಶಿ
(ಹೊಸ
ದಿಗಂತ)
ಎಂ.ಕೆ.ರಿಝ್ವಾನ್-
ಖಜಾಂಚಿ
(ದಿ
ನಶೇಮನ್
ವೀಕ್ಲಿ).
ವೈ.ಎಸ್.ಎಲ್.ಸ್ವಾಮಿ, ಜಿ.ಎಸ್.ನಾರಾಯಣ ರಾವ್, ಡಿ.ಲಿಂಗರಾಜು, ಎನ್.ಎಚ್.ಮ್ತುತ್ಯುಂಜಯ, ಸೈಯದ್ ಶರ್ಫುದ್ದೀನ್ ಮತ್ತು ವೈ.ಜಿ.ಅಶೋಕ್ ಕುಮಾರ್ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಚುನಾಯಿತರಾಗಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...
Comments
Story first published: Monday, May 5, 2003, 5:30 [IST]