12 ವರ್ಷದ ನಂತರ ತಿರುಪತಿಯಲ್ಲಿ ವಜ್ರ ಹರಾಜು
ತಿರುಪತಿ : ಹನ್ನೆರಡು ವರ್ಷಗಳ ಸುದೀರ್ಘ ಅವಧಿಯ ನಂತರ ಅಮೂಲ್ಯ ವಜ್ರ ಹಾಗೂ ಹರಳುಗಳನ್ನು ಹರಾಜು ಹಾಕಲು ತಿರುಮಲ ತಿರುಪತಿ ದೇವಸ್ಥಾನಮ್ಸ್ (ಟಿಟಿಡಿ) ತೀರ್ಮಾನಿಸಿದೆ.
ಪ್ರಸ್ತುತ ಟಿಟಿಡಿಯಲ್ಲಿ ಒಟ್ಟು 713 ಕಿಲೋ ತೂಕದ ವಜ್ರ ಹಾಗೂ ಹರಳುಗಳ ಸಂಗ್ರಹವಿದೆ. ಈ ಪೈಕಿ 207 ಕಿಲೋ ವಜ್ರ ಹಾಗೂ ಹರಳುಗಳನ್ನು ಮಾತ್ರ ಹರಾಜು ಹಾಕಲು ತಮಿಳುನಾಡು ಸರ್ಕಾರ ಅನುಮತಿ ಕೊಟ್ಟಿದೆ. ಈ ಹರಾಜಿನಿಂದ 12 ರಿಂದ 13 ಕೋಟಿ ರುಪಾಯಿ ಆದಾಯವನ್ನು ದೇವಳ ನಿರೀಕ್ಷಿಸಿದೆ.
ಭಕ್ತ ಮಹಾಶಯರು ಔದಾರ್ಯದಿಂದ ಕೊಟ್ಟಿರುವ ಕಾಣಿಕೆಗಳಲ್ಲಿ ವಜ್ರ, ಮುತ್ತು, ರೂಬಿ, ಪಚ್ಚೆ ಕಲ್ಲು, ಜೇನುತುಪ್ಪದ ಹರಳು ಮೊದಲಾದ ದುಬಾರಿ ಬೆಲೆಯ ವಸ್ತುಗಳೂ ಉಂಟು. ಈ ಹರಳುಗಳನ್ನು ಹಾಗೂ ವಜ್ರವನ್ನು ವಿಂಗಡಿಸುವ ಕೆಲಸವನ್ನು ಮಾಡಲೆಂದೇ ದೇವಳದಲ್ಲಿ ಪ್ರತ್ಯೇಕ ಸಿಬ್ಬಂದಿಯಿದ್ದಾರೆ.
ದೇವರ ಮುಂದಿಟ್ಟು ಪೂಜೆ ಮಾಡಿರುವುದರಿಂದ ವಜ್ರ ಹಾಗೂ ಹರಳುಗಳ ಬೆಲೆ ಸಾಕಷ್ಟು ಏರುತ್ತದೆ. ದೇವರ ಪ್ರಸಾದವನ್ನು ಪಡೆಯಲು ಭಕ್ತರು ಪೋಟಿಯಲ್ಲಿ ಹರಾಜು ಕೂಗುತ್ತಾರೆ. ಹರಾಜು ಕೂಗಲೆಂದೇ ಸಭಾ ಭವನವನ್ನು ಸಜ್ಜುಗೊಳಿಸುವ ಕೆಲಸ ನಡೆಯುತ್ತಿದೆ. ಅಲ್ಲಿ ಸರ್ಕ್ಯೂಟ್ ಕ್ಯಾಮರಾಗಳನ್ನಿಟ್ಟು, ಸಾಕಷ್ಟು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸುವ ಪ್ರಕ್ರಿಯೆ ಕುರಿತು ಈಗಾಗಲೇ ಮಾತುಕತೆ ನಡೆದಿದೆ. ಹರಾಜು ಕೂಗುವ ದಿನಾಂಕವನ್ನು ಸದ್ಯದಲ್ಲೇ ಪ್ರಕಟಿಸುವುದಾಗಿ ಟಿಟಿಡಿ ಹೇಳಿದೆ.
(ಇನ್ಫೋ ವಾರ್ತೆ)
ವಾರ್ತಾ
ಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...