ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾರ್ಸ್‌ ನಿವಾರಣೆಗೆ ಉಡುಪಿ ಮಠದಲ್ಲಿ ಯಾಗ

By Staff
|
Google Oneindia Kannada News

ಉಡುಪಿ : ಜಗತ್ತನ್ನು ತಲ್ಲಣಗೊಳಿಸುತ್ತಿರುವ ಸಾರ್ಸ್‌ ರೋಗ ನಿವಾರಣೆಯ ಸಲುವಾಗಿ ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಮೇ 2ನೇ ತಾರೀಕಿನಿಂದ 15 ದಿನಗಳ ಕಾಲ ಜ್ಯೋತಿಷ್ಟ್ಯೋಮ ಸೋಮಯಾಗ ಮಾಡುತ್ತಿದ್ದೇವೆ ಎಂದು ಪರ್ಯಾಯ ಪಲಿಮಾರು ಮಠದ ವಿದ್ಯಾಧೀಶ ತೀರ್ಥ ಸ್ವಾಮೀಜಿ ಸುದ್ದಿಗಾರರಿಗೆ ತಿಳಿಸಿದರು.

ಸಾರ್ಸ್‌ ಎಂಬ ಹೊಸ ಮಾರಿ ಜಗತ್ತನ್ನು ಆತಂಕದ ಮಡುವಲ್ಲಿ ಕೆಡವಿದೆ. ಭಾರತ ಕೂಡ ಇದಕ್ಕೆ ಹೊರತಾಗಿಲ್ಲ. ವಿಮಾನ ಯಾತ್ರಿಕರಂತೂ ಭೀತಿ ನಡುವೆಯೇ ಪ್ರಯಾಣಿಸಬೇಕಾದ ತುರ್ತು ಎದುರಾಗಿದೆ. ಪ್ರಕೃತಿ ಮುನಿದರೆ ಇಂಥಾ ಮಹಾಮಾರಿಗಳು ಕೆನ್ನಾಲಗೆ ಚಾಚುತ್ತವೆ. ಇದಕ್ಕೆ ಭಗವಂತನ ದಯೆ ಮೂಲ ಪರಿಹಾರವಾದೀತು. ಹೀಗಾಗಿ ಜ್ಯೋತಿಷ್ಟ್ಯೋಮ ಸೋಮಯಾಗ ಮಾಡುತ್ತಿದ್ದೇವೆ. ಈ ಯಾಗದಲ್ಲಿ ಮೂವತ್ತಾರು ಅರ್ಚಕರು ಭಾಗವಹಿಸಲಿದ್ದಾರೆ ಎಂದು ಸ್ವಾಮೀಜಿ ಹೇಳಿದರು.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X