ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಗಿಗುಡ್ಡದಲ್ಲಿ ಮೇ2ರಿಂದ ‘ಅತಿರುದ್ರಮಹಾಯಾಗ’

By Staff
|
Google Oneindia Kannada News

ಬೆಂಗಳೂರು : ಚಿತ್ರಭಾನು ಸಂವತ್ಸರದಲ್ಲಿ ವಿಶ್ವದ ಸಕಲ ಜೀವಿಗಳಿಗೂ ಒಳ್ಳೆಯದಾಗಲಿ ಎನ್ನುವ ಉದ್ದೇಶದಿಂದ ನಗರದ ರಾಗಿಗುಡ್ಡದ ಶ್ರೀ ಪ್ರಸನ್ನ ಆಂಜನೇಯಸ್ವಾಮಿ ಭಕ್ತಮಂಡಳಿಯು ‘ಶ್ರೀ ಅತಿರುದ್ರ ಮಹಾಯಾಗ’ ನಡೆಸಲಿದೆ.

ಮೇ 2 ರಿಂದ 4ರವರೆಗೆ ನಡೆಯುವ ‘ಶ್ರೀ ಅತಿರುದ್ರ ಮಹಾಯಾಗ’ವು 500 ಮಂದಿ ಋತ್ವಿಜರ ಮುಂದಾಳತ್ವದಲ್ಲಿ ನಡೆಯಲಿದೆ. ಯಾಗಕ್ಕಾಗಿ 11 ಯಜ್ಞಕುಂಡಗಳನ್ನು ಸಿದ್ಧಪಡಿಸಲಾಗುತ್ತಿದ್ದು , ಸುಮಾರು 10 ಸಾವಿರ ಮಂದಿ ‘ಅತಿರುದ್ರ ಮಹಾಯಾಗ’ದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

ಚಿತ್ರಭಾನು ಸಂವತ್ಸರದಲ್ಲಿ ದೇಶವು ಎದುರಿಸಿದ ಆಗುಹೋಗುಗಳ ಹಿನ್ನೆಲೆಯಲ್ಲಿ ಹಾಗೂ ಸ್ವಭಾನು ಸಂವತ್ಸರದಲ್ಲಿ ಉತ್ತಮ ಫಲಗಳನ್ನು ಆಶಿಸಿ ‘ಅತಿರುದ್ರ ಮಹಾಯಾಗ’ ಹಮ್ಮಿಕೊಳ್ಳಲಾಗಿದೆ ಎಂದು ಭಕ್ತಮಂಡಳಿಯ ಪ್ರಕಟಣೆ ತಿಳಿಸಿದೆ.

(ಇನ್ಫೋ ವಾರ್ತೆ)

ಪೂರಕ ಓದಿಗೆ-
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X