ಎಸ್.ಮರಿಸ್ವಾಮಿ ಬೆಂಗಳೂರು ಪೊಲೀಸ್ ಕಮೀಷನರ್
ಬೆಂಗಳೂರು : ನಗರದ ಪೊಲೀಸ್ ಮಹಾನಿರ್ದೇಶಕರಾಗಿ ಎಸ್.ಮರಿಸ್ವಾಮಿ ಅವರನ್ನು ನೇಮಿಸಿ ಏಪ್ರಿಲ್ 30ರ ಬುಧವಾರ ರಾಜ್ಯಸರ್ಕಾರ ಆದೇಶ ಹೊರಡಿಸಿದೆ.
ಪ್ರಸ್ತುತ
ನಗರ
ಪೊಲೀಸ್
ಕಮೀಷನರ್
ಆಗಿರುವ
ಎಂ.ಡಿ.ಸಿಂಗ್
ಅವರು
ಸಿಓಡಿ
ಪೊಲೀಸ್
ಮಹಾ
ನಿರ್ದೇಶಕರಾಗಿ
ಬಡ್ತಿ
ಹೊಂದಿದ್ದು
,
ಇದರಿಂದಾಗಿ
ತೆರವಾಗುವ
ಬೆಂಗಳೂರು
ಮಹಾನಗರ
ಪೊಲೀಸ್
ಮಹಾ
ನಿರ್ದೇಶಕರ
ಸ್ಥಾನವನ್ನು
ಎಸ್.ಮರಿಸ್ವಾಮಿ
ತುಂಬುವರು.
ಈವರೆಗೆ
ಹೆಚ್ಚುವರಿ
ಪೊಲೀಸ್
ಮಹಾ
ನಿರ್ದೇಶಕ
(ಎಡಿಜಿ)ರಾಗಿ
ಮರಿಸ್ವಾಮಿ
ಕರ್ತವ್ಯ
ನಿರ್ವಹಿಸುತ್ತಿದ್ದರು.
ಬೆಂಗಳೂರು ನಗರ ಪೊಲೀಸ್ ಕಮೀಷನರ್ ಸ್ಥಾನಕ್ಕೆ ಭಾರೀ ಪೈಪೋಟಿ ಕಂಡುಬಂದಿದ್ದು , ಅನೇಕ ಹಿರಿಯ ಪೊಲೀಸ್ ಅಧಿಕಾರಿಗಳ ಹೆಸರು ಸ್ಪರ್ಧೆಯಲ್ಲಿ ಚಾಲ್ತಿಯಲ್ಲಿದ್ದವು. ಹಿರಿಯ ಪೊಲೀಸ್ ಅಧಿಕಾರಿಗಳಾದ ಸುಭಾಷ್ ಭರಣಿ, ಬೋರ್ಕರ್, ಜೀಜಾ ಹರಿಸಿಂಗ್ ಮುಂತಾದವರು ಸ್ಪರ್ಧೆಯ ರೇಸಿನಲ್ಲಿದ್ದರು.
ಕಮೀಷನರ್ ಯಾರಾದರೆ ಏನಂತೆ ? ಬೆಂಗಳೂರು ನಗರದಲ್ಲಿ ಅಪರಾಧಗಳು ಕಡಿಮೆಯಾಗಬೇಕು. ಕೆಟ್ಟು ಕೇಸೆದ್ದಿರುವ ಸಂಚಾರ ಸಮಸ್ಯೆಗಳು ಹದ್ದುಬಸ್ತಿಗೆ ಬರಬೇಕು. ಠಾಣೆಗಳಲ್ಲಿ ಮೈಉಂಡಿರುವ ಸೋಮಾರಿ ಮತ್ತು ಅದಕ್ಷ ಹಾಗೂ ಭ್ರಷ್ಟ ಸಿಬ್ಬಂದಿಗೆ ಬಿಸಿ ಮುಟ್ಟಿಸಿ ಆಡಳಿತವನ್ನು ಚುರುಕುಗೊಳಿಸಬೇಕು. ಹಾಗೆ ಮಾಡುವ ತಾಕತ್ತು ಮರಿಸ್ವಾಮಿ ಅವರಿಗಿದೆ. ನೋಡುವಾ !
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...