ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಜ್ಯೋತಿಷ್ಯ ಶಾಸ್ತ್ರ ಸೇವೆಗಾಗಿ ಗಣೇಶಸ್ಪೀಕ್ಸ್ .ಕಾಂ
ಬೆಂಗಳೂರು : ಮುಂಬಯಿ ಮೂಲದ ಸಿದ್ಧಿ ವಿನಾಯಕ ಜ್ಯೋತಿಷ್ಯ ಶಾಸ್ತ್ರ ಸೇವೆಯು ಗಣೇಶಸ್ಪೀಕ್ಸ್.ಕಾಂ (Ganeshaspeaks.com) ಎಂಬ ವೆಬ್ಸೈಟ್ನ್ನು ಆರಂಭಿಸಿದೆ.
ಜ್ಯೋತಿಷ್ಯ ಶಾಸ್ತ್ರ ಕ್ಷೇತ್ರದಲ್ಲಿ ಹೆಸರು ಮಾಡಿರುವ, ಲೇಖಕ ಬೇಜನ್ ದರುವುಲ್ಲಾ ನೇತೃತ್ವದಲ್ಲಿ ಈ ವೆಬ್ಸೈಟ್ ಕಾರ್ಯ ನಿರ್ವಹಿಸುತ್ತದೆ.
ಮದುವೆ, ಪ್ರೀತಿ- ಪ್ರೇಮ ಮತ್ತು ಆರೋಗ್ಯ ವಿಷಯಗಳಿಗೆ ಸಂಬಂಧಿಸಿದಂತೆ ಈ ಡಾಟ್ಕಾಂ ಕೇಳುಗರ ಪ್ರಶ್ನೆಗಳಿಗೆ ಉತ್ತರಿಸುತ್ತದೆ. ರಾಶಿ, ನಕ್ಷತ್ರಗಳ ಆಧಾರದ ಮೇಲೆ ಆಸಕ್ತರು ತಮ್ಮ ಭವಿಷ್ಯ ತಿಳಿದುಕೊಳ್ಳಬಹುದು.
ಗಣೇಶಸ್ಪೀಕ್ಸ್ನ ಸಿಇಒ ಹೇಮಾಂಗ್ ಪಂಡಿತ್ರ ಪ್ರಕಾರ- ಈ ಡಾಟ್ಕಾಂ, ವಿವಾಹ ಮತ್ತಿತರ ವಿಷಯಗಳಿಗೆ ಸಂಬಂಧಿಸಿದಂತೆ ಇತರ ಸಂಸ್ಥೆಗಳೊಂದಿಗೆ ಒಪ್ಪಂದಗಳನ್ನು ಮಾಡಿಕೊಂಡು ಮುನ್ನಡೆಯಲಿದೆ. ಭಾರತದ ವಿವಿಧ ಮುಖ್ಯ ಪಟ್ಟಣಗಳಲ್ಲಿ ಗಣೇಶಸ್ಪೀಕ್ಸ್ನ ಕೇಂದ್ರಗಳು ಆರಂಭವಾಗಲಿದ್ದು, ಪ್ರಾದೇಶಿಕ ಜ್ಯೋತಿಷ್ಯ ಶಾಸ್ತ್ರಕ್ಕೆ ಹೆಚ್ಚು ಒತ್ತು ಕೊಡಲಾಗುವುದು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...
Comments
Story first published: Tuesday, April 29, 2003, 5:30 [IST]