ಸಂಜೆ ಬದುಕಿನವರಿಗೆ ನೆಮ್ಮದಿಯ ನೆಲೆ ಬೇಕಾಗಿದೆ!
ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮನೆಗಳಿಗೆ ಬೇಡಿಕೆ ಎಂದೂ ಕುಸಿದದ್ದೇ ಇಲ್ಲ . ಬಾಡಿಗೆ ಮನೆಗಳಲ್ಲಿ ನೀರಿದೆಯಾ... ಕರೆಂಟು ತೊಂದರೆ ಇಲ್ಲವಾ, ಅಕ್ಕ ಪಕ್ಕ ಜನ ಹೇಗೆ ? ಯಾವ ಜಾತಿ, ಯಾವ ಭಾಷೆಯವರು... ಹೀಗೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳ ಸುರಿದು, ಲೆಕ್ಕಾಚಾರ ಹಾಕಿ ಸೂರಿನಡಿಗೆ ತೂರಿಕೊಳ್ಳುವುದು ಸಾಮಾನ್ಯ.
ಆದರೆ ಈಗ ನಗರದಲ್ಲಿ ಮನೆಗಳಿಗೆ ಹೊಸ ನಮೂನೆಯ ಬೇಡಿಕೆ ಬಂದಿದೆ. ಅಪ್ಪ ಅಮ್ಮ ಮುದುಕರು, ಇವರಿಗೆ ಸಾಕಷ್ಟು ರಕ್ಷಣೆ ಇದೆಯಾ ಎನ್ನುವುದು ಆ ಹೊಸ ಬೇಡಿಕೆ.
ಹಿರಿಯ ನಾಗರಿಕರಿಗೆ ಸೂಕ್ತ ರಕ್ಷಣೆ ನೀಡುವ ಕಾಲೊನಿಯ ಅಥವಾ ವಠಾರದ, ಅದೂ ಅಲ್ಲದಿದ್ದರೆ ಫ್ಲಾಟ್ ಒಂದರ ಜರೂರತ್ತು ಈಗ ಬೆಂಗಳೂರಿಗಿದೆ. ಹಿರಿಯ ನಾಗರಿಕರಿಗೆ ರಕ್ಷಣೆ ನೀಡುವ ಮನೆ ದೊರೆಯುತ್ತದೆ ಎಂಬ ಬೋರ್ಡ್ ತಗುಲಿಸಿದ ಅರ್ಧ ಗಂಟೆಗೆ ಗಿರಾಕಿಗಳು ಕ್ಯೂ ನಿಲ್ಲಬಹುದಾದ ಪರಿಸ್ಥಿತಿ ಬೆಂಗಳೂರಿನಲ್ಲಿದೆ.
ನೀರು ಗಾಳಿ ಬೆಳಕು, ಗ್ಯಾಸಿನ ಮೂಲಭೂತ ಸೌಕರ್ಯಗಳ ಪಟ್ಟಿಯಲ್ಲಿ ಈಗ ಹಿರಿಯರಿಗೆ ರಕ್ಷಣೆಯೂ ಸೇರಿಕೊಂಡಿದೆ. 24 ಗಂಟೆಗಳ ಕಾಲವೂ ಹಿರಿಯ ನಾಗರಿಕರಿಗೆ ಸಹಾಯ ದೊರಕುವ, ನೆಮ್ಮದಿ ಕೊಡುವ ತಾಣವೊಂದರ ಅಗತ್ಯ ಬೆಂಗಳೂರಿಗಿದೆ. ಇದು ಒಂದು ಹೊಸ ಬಿಸಿನೆಲ್ ಆ್ಯಂಗಲ್ ಅನಿಸಿದರೂ ಇಂದಿನ ಅಗತ್ಯ ಎಂಬುದರಲ್ಲಿ ಎರಡು ಮಾತಿಲ್ಲ.
ದಂಡುಪಾಳ್ಯ
ಗ್ಯಾಂಗ್
ನಗರದ
ಹಿರಿಯ
ನಾಗರಿಕರ
ಮೇಲೆ
ಸತತವಾಗಿ
ನಡೆಸಿದ
ಹಲ್ಲೆ
ಹಾಗೂ
ನಗರದ
ಸಿರಿವಂತ
ಬಡಾವಣೆಗಳಲ್ಲಿ
ನಡೆದ
ಹಿರಿಯ
ನಾಗರಿಕರ
ಕೊಲೆ
ಪ್ರಕರಣಗಳು
ಮುದುಕರು
ನೆಮ್ಮದಿಯ
ತಾಣವೊಂದನ್ನು
ಅರಸುವಂತೆ
ಮಾಡಿದೆ.
ನಿವೃತ್ತರ
ಸ್ವರ್ಗ
ಬೆಂಗಳೂರಿನಲ್ಲಿ
ನಿವೃತ್ತರಿಗಿಷ್ಟು
ರಕ್ಷಣೆ
ಬೇಕಾಗಿದೆ
!
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...