ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹರ್‌ಕೀ ಪೌರಿಯಲ್ಲಿ ಗಂಗಾ ನದಿ ಬಂಧನ !

By Staff
|
Google Oneindia Kannada News

ಡೆಹ್ರಾಡೂನ್‌: ಮುಂದಿನ ವರ್ಷ ಅರ್ಧ ಕುಂಭ ಮೇಳ ನಡೆಯುವ ಹಿನ್ನೆಲೆಯಲ್ಲಿ ಭಾರತದ ಪವಿತ್ರ ನದಿ ಎನಿಸಿಕೊಂಡಿರುವ ಗಂಗಾ ನದಿಗೆ ಅಡ್ಡವಾಗಿ ಸೇತುವೆ ನಿರ್ಮಿಸಲು ಸರಕಾರ ನಿರ್ಧರಿಸಿದೆ.

ಮಾಲವೀಯ ದ್ವೀಪ -ಪಂತ್‌ ದ್ವೀಪಗಳನ್ನು ಸಂಪರ್ಕಿಸುವ ಶಾಶ್ವತ ಸೇತುವೆ ನಿರ್ಮಾಣಕ್ಕಾಗಿ ಮೊದಲ ಹಂತದ ಕಾಮಗಾರಿಗಳು ಆರಂಭವಾಗಿವೆ. ಹರಿದ್ವಾರದ ಹರ್‌ಕೀ ಪೌರಿಯ ಮೂಲಕ ಹರಿದುಹೋಗುತ್ತಿರುವ ಗಂಗಾ ನದಿಗೆ ಒಡ್ಡು ನಿರ್ಮಿಸಿ ಬಂಧಿಸಲಾಗಿದೆ. ಈಗ ಗಂಗಾ ನದಿಯು ನೀಲಧಾರಾದ ಕಡೆಯಿಂದ ಹರಿದು ಹೋಗುತ್ತಿದ್ದು, ಹರ್‌ ಕೀ ಪೌರಿಯಲ್ಲಿ ಸೇತುವೆ ನಿರ್ಮಾಣಕ್ಕೆ ವ್ಯವಸ್ಥೆ ಮಾಡಲಾಗಿದೆ.

ಏಪ್ರಿಲ್‌ ತಿಂಗಳ ಅಂತ್ಯದವರೆಗೂ ಗಂಗಾ ನದಿ ನೀಲಧಾರಾ ಮೂಲಕ ಹರಿಯುತ್ತದೆ. ಈ ಅವಧಿಯಲ್ಲಿ ಹರ್‌ಕೀ ಪೌರಿಯ ಭಕ್ತರಿಗೆ ಗಂಗಾ ಪೂಜೆ ಹಾಗೂ ನಿತ್ಯಾರತಿ ಸಲ್ಲಿಸಲು ಅವಕಾಶ ನೀಡುವುದಕ್ಕಾಗಿ ಗಂಗೆಯ ಪುಟ್ಟ ಝರಿಯಾಂದನ್ನು ಹರಿಸಲಾಗುತ್ತಿದೆ. ಆದರೆ ಹರ್‌ ಕೀ ಪೌರಿಯಲ್ಲಿ ಪವಿತ್ರ ಸ್ನಾನ ಮಾಡುವುದು ಸಾಧ್ಯವಾಗದು.

(ಇನ್ಫೋ ವಾರ್ತೆ)

Post your views

ಮುಖಪುಟ / ಇವತ್ತು... ಈ ಹೊತ್ತು...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X