ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಿರುಪತಿ ತಿಮ್ಮಪ್ಪನ ದೇವಳದಲ್ಲಿ ‘ತಿರು ಮಾಂಗಲ್ಯ’ ಬಿಕರಿ

By Staff
|
Google Oneindia Kannada News

ತಿರುಪತಿ : ಇಲ್ಲಿನ ತಿರುಮಲ ವೆಂಕಟೇಶ್ವರ ದೇವಳದ ಅಧಿಕಾರಿಗಳು ತಿರು ಮಾಂಗಲ್ಯ ಮಾರಲು ನಿರ್ಧರಿಸಿದ್ದಾರೆ.

ತಿರುಮಲ ತಿರುಪತಿ ದೇವಸ್ಥಾನಮ್ಸ್‌ (ಟಿಟಿಡಿ) ಸೋಮವಾರ (ಏ. 7) ಒಂದು ಸಭೆ ನಡೆಸಿ, ‘ತಿರು ಮಾಂಗಲ್ಯಂ’ ಎಂಬ ಮಂಗಳ ಸೂತ್ರ ತಯಾರಿಸಿ ಮಾರುವ ನಿರ್ಧಾರ ಕೈಗೊಂಡಿತು.

ದೇವಳಕ್ಕೆ ಕಾಣಿಕೆ ರೂಪದಲ್ಲಿ ಬರುವ ಚಿನ್ನವನ್ನು ಉಪಯೋಗಿಸಿ ಮಾಂಗಲ್ಯ ತಯಾರಿಸಲಾಗುವುದು. ಮಾಂಗಲ್ಯದ ಮೇಲೆ ವೆಂಕಟೇಶ ದೇವರ ಅರ್ಧಾಂಗಿ ಪದ್ಮಾವತಿಯ ಚಿತ್ರ ಕೂಡ ಬಿಡಿಸಲಾಗುವುದು. ದೇವರ ಮುಂದಿಟ್ಟು, ಪೂಜೆ ಮಾಡಿಕೊಡುವುದರಿಂದ ಈ ಮಾಂಗಲ್ಯ ಶ್ರೇಷ್ಠವಾದದ್ದು ಎಂದು ದೇವಳದ ಅಧಿಕಾರಿಗಳು ಹೇಳಿದ್ದಾರೆ.

ಕಳೆದ ಎರಡು ದಶಕಗಳಿಂದ ವೆಂಕಟೇಶ್ವರ ದೇವರ ಚಿತ್ರವಿರುವ ಚಿನ್ನದ ನಾಣ್ಯಗಳನ್ನು ದೇವಳದಲ್ಲಿ ಮಾರಲಾಗುತ್ತಿದೆ. ಈ ವಹಿವಾಟಿಗೆ ಈಗ ಮಾಂಗಲ್ಯ ಹೊಸ ಸೇರ್ಪಡೆ.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X