ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊನ್ನಾಳಿ ಹಿಂದಿ ಮೇಷ್ಟ್ರು ಶ್ರೀನಾಥ್‌ಗೆ ರಾಷ್ಟ್ರಪ್ರಶಸ್ತಿ

By Staff
|
Google Oneindia Kannada News

ಶಿವಮೊಗ್ಗ : ಹಿಂದಿ ಮತ್ತು ಕನ್ನಡ ಅನುವಾದದ ಕೆಲಸಕ್ಕಾಗಿ ಡಿ.ಎನ್‌.ಶ್ರೀನಾಥ್‌ ಅವರಿಗೆ ರಾಷ್ಟ್ರ ಪ್ರಶಸ್ತಿ ಸಂದಿದ್ದು, ಈ ಯುಗಾದಿ ಅವರ ಪಾಲಿಗೆ ಮರೆಯಲಾಗದ ಉಡುಗೊರೆ ಕೊಟ್ಟಂತಾಗಿದೆ.

ಹಿಂದಿಯೇತರ ಹಿಂದಿ ಲೇಖಕರು ಹಾಗೂ ಅನುವಾದಕರಿಗೆ ಕೊಡುವ ರಾಷ್ಟ್ರೀಯ ಪ್ರಶಸ್ತಿ ಈ ಬಾರಿ ಶ್ರೀನಾಥ್‌ ಅವರಿಗೆ ಲಭಿಸಿದೆ. 2000ನೇ ಇಸವಿಯಲ್ಲಿ ಪ್ರಕಟವಾದ ‘ಕನ್ನಡ ಕಿ ಪ್ರತಿನಿಧಿ ಕಹಾನಿಯಾ’ ಕೃತಿಯ ಅಚ್ಚುಕಟ್ಟಾದ ಕೆಲಸಕ್ಕೆ ಈ ಪ್ರಶಸ್ತಿ ಸಿಕ್ಕಿದೆ. ಕನ್ನಡದ ವಿವಿಧ ಲೇಖಕರ ಕಥೆಗಳನ್ನು ಹಿಂದಿ ಭಾಷೆಗೆ ಅನುವಾದಿಸಿ, ಈ ಕೃತಿಯನ್ನು ರಚಿಸಿದ್ದಾರೆ. 50 ಸಾವಿರ ರುಪಾಯಿ ಹಾಗೂ ಬಿನ್ನವತ್ತಳಿಕೆಯನ್ನು ಪ್ರಶಸ್ತಿ ಒಳಗೊಂಡಿದೆ.

ಹೊನ್ನಾಳಿ ತಾಲ್ಲೂಕಿನ ಚಿಳೂರಿನಲ್ಲಿ ನ್ಯಾಷನಲ್‌ ಎಜುಕೆಷನ್‌ ಸೊಸೈಟಿ ನಡೆಸುವ ಪ್ರೌಢಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿರುವ ಶ್ರೀನಾಥ್‌ ಹಿಂದಿ ಮೇಷ್ಟ್ರಾಗಿ ಒಳ್ಳೆಯ ಹೆಸರು ಮಾಡಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X