ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಶ್ಮೀರ ಕೊಳ್ಳದಲ್ಲಿ ಕೊಡಗು ಸೈನಿಕನ ವೀರಮರಣ

By Staff
|
Google Oneindia Kannada News

ನಾಪೋಕ್ಲು : ಕಾಶ್ಮೀರ ಕೊಳ್ಳದ ಶ್ರೀನಗರದಲ್ಲಿ ನಡೆದ ಭಯೋತ್ಪಾದಕರ ವಿರುದ್ಧದ ಹೋರಾಟದಲ್ಲಿ ಕೊಡಗಿನ ನಾಪೋಕ್ಲು ಮೂಲದ ಗಡಿಭದ್ರತಾ ಪಡೆಯ ಸೈನಿಕ, ಕನ್ನಡಿಗ ಪಾಳಂಗಪ್ಪ ವೀರ ಮರಣವನ್ನಪ್ಪಿದ್ದಾರೆ.

36 ವರ್ಷ ವಯಸ್ಸಿನ ಪಾಳಂಗಪ್ಪ ನಾಪೋಕ್ಲು ತಾಲ್ಲೂಕಿನ ಅಯಿಯೆನ್‌ಗೆರಿಯ ನಿವಾಸಿ. ಪತ್ನಿ ಹಾಗೂ ಇಬ್ಬರು ಮಕ್ಕಳ ಪುಟ್ಟ ಕುಟುಂಬದ ಯಜಮಾನ. ಗಡಿ ಭದ್ರತಾ ಪಡೆ (ಬಿಎಸ್‌ಎಫ್‌)ಯ ಹತ್ತನೇ ಬೆಟಾಲಿಯನ್‌ಗೆ 1986ರಲ್ಲಿ ಸೇರಿದ್ದ ಪಾಳಂಗಪ್ಪ ದೇಶದ ವಿವಿಧೆಡೆಗಳಲ್ಲಿ ರಕ್ಷಣಾ ಕೆಲಸವನ್ನು ನಿರ್ವಹಿಸಿದ್ದರು.

‘ಕಳೆದ ತಿಂಗಳಷ್ಟೇ ಪತ್ರ ಬರೆದು ಏಪ್ರಿಲ್‌ನಲ್ಲಿ ಹಣ ಕಳುಹಿಸುವುದಾಗಿ ಹೇಳಿದ್ದರು. ಆದರೆ ಅವರ ಸಾವಿನ ಸುದ್ದಿಯೇ ಮನೆ ಬಾಗಿಲಿಗೆ ಬಂತು’ ಎಂದು ಪಾಳಂಗಪ್ಪ ಅವರ ಪತ್ನಿ ಕವಿತಾ ದುಃಖಿಸುತ್ತಾರೆ. ಪಾಳಂಗಪ್ಪ ಅವರ ಅಣ್ಣ ಭೀಮಯ್ಯ ಕೂಡ ಕಳೆದ 15 ವರ್ಷಗಳಿಂದ ಸೇನೆಯಲ್ಲಿ ರಕ್ಷಣಾ ಕೆಲಸ ನಿರ್ವಹಿಸುತ್ತಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X