ಹಿಪ್ಪಿ ಹಾವಳಿಯಿಂದ ಹಂಪಿ ರಕ್ಷಣೆ- ರಾಣಿ ಸತೀಶ್
ಬೆಂಗಳೂರು: ಹಂಪಿಯಲ್ಲಿ ಹೆಚ್ಚುತ್ತಿರುವ ವಿದೇಶೀ ಸಂಸ್ಕೃತಿಯ ಹಾವಳಿಯನ್ನು ತಡೆಗಟ್ಟಲು ಪ್ರಸಿದ್ಧ ಸಂಶೋಧಕ ಡಾ. ಎಂ. ಚಿದಾನಂದ ಮೂರ್ತಿ ಅವರ ನೆರವಿನೊಂದಿಗೆ ಸರಕಾರವು ಸೂಕ್ತ ಯೋಜನೆ ರೂಪಿಸಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವೆ ರಾಣಿ ಸತೀಶ್ ವಿಧಾನ ಪರಿಷತ್ತಿನಲ್ಲಿ ಭರವಸೆ ನೀಡಿದ್ದಾರೆ.
ಹಂಪಿಯಲ್ಲಿ ಹಿಪ್ಪಿ ಹಾವಳಿ ಹೆಚ್ಚಾಗಿರುವುದನ್ನು ವಿರೋಧಿಸಿ ಮಾರ್ಚ್ 23ರಂದು ಡಾ. ಚಿದಾನಂದ ಮೂರ್ತಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗಿತ್ತು. ಹಂಪಿಯ ಪರಿಸ್ಥಿತಿಯ ಬಗ್ಗೆ ಈಗಾಗಲೇ ನಾನು ಮೂರ್ತಿಯವರೊಂದಿಗೆ ಚರ್ಚಿಸಿದ್ದೇನೆ. ನಂತರ ಗೃಹ ಇಲಾಖೆಯಾಡನೆಯೂ ಚರ್ಚಿಸಿದ್ದೇನೆ. ಹಂಪಿಯನ್ನು ಹಿಪ್ಪಿಗಳ ಹಾವಳಿಗಳಿಂದ ರಕ್ಷಿಸಲು ಏನೇನು ಕ್ರಮ ಕೈಗೊಳ್ಳಬಹುದು ಎಂಬ ಕುರಿತು ಒಂದು ವರದಿಯನ್ನು ನೀಡುವಂತೆ ಮೂರ್ತಿಗಳಿಗೆ ತಿಳಿಸಲಾಗಿದೆ. ವರದಿ ಸಿದ್ಧವಾಗುತ್ತಿದ್ದಂತೆಯೇ ಈ ಸಮಸ್ಯೆಯನ್ನು ಬಗೆಹರಿಸಲಾಗುತ್ತದೆ ಎಂದು ಸಚಿವೆ ತಿಳಿಸಿದರು.
ಹಂಪಿ ಪ್ರದೇಶಗಳಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಕ್ರಮ ಕೈಗೊಳ್ಳಲಾಗಿದೆ. ಕಮಲಾಪುರ ಪೊಲೀಸ್ ಠಾಣೆಯಲ್ಲಿ ಈವರೆಗೆ 11 ಪ್ರಕರಣಗಳು ದಾಖಲಾಗಿವೆ ಎಂದು ರಾಣಿ ಸತೀಶ್ ಹೇಳಿದರು.
(ಇನ್ಫೋ ವಾರ್ತೆ)
ವಾರ್ತಾ
ಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...