ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ವ್ಯಾಟ್ ವಿರೋಧ: ಬೆಂಗಳೂರು ಮಾರುಕಟ್ಟೆಗಳು ಬಿಕೋ
ಬೆಂಗಳೂರು : ಮೌಲ್ಯ ವರ್ಧಿತ ತೆರಿಗೆ ಪದ್ಧತಿ (ವ್ಯಾಟ್) ವಿರೋಧಿಸಿ ಕರ್ನಾಟಕ ವ್ಯಾಪಾರ ಮತ್ತು ಉದ್ಯಮಿಗಳ ಸಂಘ ಕರೆ ಕೊಟ್ಟಿದ್ದ ಬಂದ್ಗೆ ನಗರದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ದಿನವೂ ವ್ಯಾಪಾರಿ ಭರಾಟೆಯಿಂದ ಗಿಜಿಗುಡುತ್ತಿದ್ದ ಆರ್.ಎಂ.ಸಿ.ಯಾರ್ಡ್, ಸಿಟಿ ಮಾರ್ಕೆಟ್, ಮೆಜೆಸ್ಟಿಕ್, ಚಿಕ್ಕಪೇಟೆ, ಜೆ.ಸಿ.ರಸ್ತೆ, ಕಲಾಸಿ ಪಾಳ್ಯ, ಅವೆನ್ಯೂ ರಸ್ತೆ, ಬಿವಿಕೆ ಅಯ್ಯಂಗಾರ್ ರಸ್ತೆ, ಯಶವಂತಪುರ, ಜಯನಗರ ಮೊದಲಾದ ಜಾಗೆಗಳಲ್ಲಿ ಮಂಗಳವಾರ (ಮಾ.25) ಅರ್ಧಕ್ಕೂ ಹೆಚ್ಚು ಅಂಗಡಿಗಳು ಮುಚ್ಚಿದ್ದವು. ಕೆಲವೆಡೆಗಳಲ್ಲಿ ಶೇ.90ರಷ್ಟು ಅಂಗಡಿಗಳು ಮುಚ್ಚಿದ್ದರೆ, ಇನ್ನು ಕೆಲವೆಡೆ ನಿಧಾನವಾಗಿ ವರ್ತಕರು ವ್ಯಾಪಾರಕ್ಕೆ ಇಳಿದರು.
ಉದ್ದಿಮೆದಾರರು ಹಾಗೂ ವರ್ತಕರು ಲೆಕ್ಕ ಪತ್ರಗಳನ್ನು ಸರಿಯಾಗಿ ತೋರದಿದ್ದರೆ, ಇಲಾಖೆಯವರು ಸ್ಥಳದಲ್ಲೇ ದಂಡ ಹಾಕುವ ಪದ್ಧತಿ ವ್ಯಾಟ್.
ವ್ಯಾಟ್
ಪದ್ಧತಿಯಿಂದ
ಹೀಗಾಗುತ್ತದೆ-
- ತೆರಿಗೆಯ ಇನ್ವಾಯ್ಸ್ ನೀಡದಿದ್ದರೆ 5 ಸಾವಿರ ರುಪಾಯಿವರೆಗೆ ದಂಡ ವಿಧಿಸಬಹುದಾಗಿದೆ.
- ನೋಂದಾವಣೆಯ ಭದ್ರತಾ ಠೇವಣಿಯೇ 6 ತಿಂಗಳ ತೆರಿಗೆಗೆ ಸಮವಾಗಿದೆ.
- ಮೋಸದಿಂದ ತೆರಿಗೆ ತಪ್ಪಿಸಿಕೊಳ್ಳುವವರಿಗೆ 1 ಲಕ್ಷ ರುಪಾಯಿಯಷ್ಟು ದಂಡ ಹಾಗೂ 6 ತಿಂಗಳಿಂದ 5 ವರ್ಷದವರೆಗೆ ಜೈಲು ಶಿಕ್ಷೆ ಕೊಡಬಹುದು.
- ಗಡುವಿನೊಳಗೆ ಲೆಕ್ಕಪತ್ರ ತೋರದಿದ್ದರೆ, ದಿನಂಪ್ರತಿ 200 ರುಪಾಯಿ ದಂಡ ಹಾಕಬಹುದು.
- ವ್ಯಾಪಾರಿಗಳ ಜೇಬಿನಿಂದ ಹಿಡಿದು, ಮನೆ, ಅಂಗಡಿಗಳ ಇಂಚಿಂಚನ್ನೂ ಯಾವಾಗ ಬೇಕಾದರೂ ಅಧಿಕಾರಿಗಳು ತಲಾಷು ಮಾಡಬಹುದು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...
Comments
Story first published: Tuesday, March 25, 2003, 5:30 [IST]