ಎಸ್ಸೆಂ.ಕೃಷ್ಣ ವಿರುದ್ಧ ಮುನಿಸಿಕೊಂಡ ಜ್ಯೋತಿಷಿಗಳು !
ಬೆಂಗಳೂರು : 2003-04 ನೇ ಇಸವಿಯ ರಾಜ್ಯ ಬಜೆಟ್ ರೈತರು ಮತ್ತು ಕೃಷಿ ಕ್ಷೇತ್ರದವರಿಗೆ ಖುಷಿ ತಂದಿದ್ದರೆ- ಭವಿಷ್ಯಕಾರರು, ಹಸ್ತ ಸಾಮುದ್ರಿಕೆಯವರು, ಪರ್ತಕರ್ತರು ಹಾಗೂ ಜ್ಯೋತಿಷಿಗಳು ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಅವರ ಮೇಲೆ ಮುನಿಸಿಕೊಂಡಿದ್ದಾರೆ.
ಜ್ಯೋತಿಷಿಗಳು ಹಾಗೂ ವಿವಿಧ ವರ್ಗದ ಭವಿಷ್ಯಕಾರರನ್ನು ಕೃಷ್ಣ ತೆರಿಗೆ ಪದ್ಧತಿಯಡಿಗೆ ತಂದಿದ್ದಾರೆ. ಬೆಂಗಳೂರು ನಿವಾಸಿ ಜ್ಯೋತಿಷಿ ವರ್ಗಕ್ಕೆ ವಾರ್ಷಿಕ ಒಂದೂವರೆ ಸಾವಿರ ರೂಪಾಯಿ ಹಾಗೂ ಇತರೆಡೆ ವಾಸಿಸುವ ಭವಿಷ್ಯಕಾರರಿಗೆ ವಾರ್ಷಿಕ ಒಂದು ಸಾವಿರ ರೂಪಾಯಿ ತೆರಿಗೆ ವಿಧಿಸಲಾಗಿದೆ.
ವಾಸ್ತು , ಫೆಂಗ್ಶುಯಿ ತಜ್ಞರು, ಕಟ್ಟಡ ವಿನ್ಯಾಸಕಾರರು ಹಾಗೂ ಯೋಗ ಮತ್ತು ರೇಖೀ ಚಿಕಿತ್ಸಕರಿಗೂ ತೆರಿಗೆ ಪದ್ಧತಿ ಅನ್ವಯಿಸುತ್ತದೆ. ಯೋಗ, ರೇಖಿ ತರಬೇತಿ ಕೇಂದ್ರಗಳನ್ನು ನಡೆಸುವವರೂ ಇನ್ನು ಮುಂದೆ ತೆರಿಗೆ ನೀಡಬೇಕಾಗುತ್ತದೆ.
ಹೊಸದಾಗಿ ತೆರಿಗೆ ಲಿಸ್ಟ್ಗೆ ಸೇರಿರುವ ಇತರ ವೃತ್ತಿಗಳಲ್ಲಿ ಐಟಿ ಕಾಲ್ ಸೆಂಟರ್ಗಳು( ವಾರ್ಷಿಕ 2, 500 ರೂಪಾಯಿ), ಖಾಸಗಿ ರೇಡಿಯೋ ಪ್ರಸಾರ ಕೇಂದ್ರಗಳು (ವಾರ್ಷಿಕ 1, 500 ರೂಪಾಯಿ) ಸೇರಿವೆ. ಪತ್ರಕರ್ತರು ನೀಡಬೇಕಾದ ತೆರಿಗೆಯನ್ನೂ ವಾರ್ಷಿಕ 600 ರೂಪಾಯಿಯಿಂದ 1,000 ರೂಗಳಿಗೆ ಹೆಚ್ಚಿಸಲಾಗಿದೆ.
(ಪಿಟಿಐ)
ಮುಖಪುಟ / ಕೃಷ್ಣಗಾರುಡಿ