ತ್ವರಿತ ಅಲರ್ಟ್ ಗಳಿಗಾಗಿ
For Daily Alerts
105.68 ಕೋಟಿ ರು. ಕೊರತೆಯ ರಾಜ್ಯ ಬಜೆಟ್ ಮಂಡನೆ
ಬೆಂಗಳೂರು : ವಿಧಾನಸಭೆಯಲ್ಲಿ ಶುಕ್ರವಾರ (ಮಾ.21) 2003- 04ನೇ ಇಸವಿಯ ರಾಜ್ಯ ಆಯವ್ಯಯ ಪತ್ರವನ್ನು ವಿತ್ತ ಸಚಿವರೂ ಆಗಿರುವ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಮಂಡಿಸಿದರು. 105.68 ಕೋಟಿ ರುಪಾಯಿ ಕೊರತೆಯ ಈ ಆಯವ್ಯಯ ಪತ್ರದ ಪ್ರಕಾರ 26,907.08 ಕೋಟಿ ರುಪಾಯಿ ನಿವ್ವಳ ಆದಾಯದ ನಿರೀಕ್ಷೆಯಿದೆ.
ಒಟ್ಟು ಖರ್ಚು ಅಂದಾಜು 26,839.43 ಕೋಟಿ ರುಪಾಯಿಯಷ್ಟಿದೆ. ಸಣ್ಣ ಉಳಿತಾಯ ಯೋಜನೆಗಳ ಮೂಲಕ 1,814.40 ಕೋಟಿ ರುಪಾಯಿ, ಮಾರುಕಟ್ಟೆ ಸಾಲಗಳಿಂದ 973.51 ಕೋಟಿ ರುಪಾಯಿ, ಒಡಂಬಡಿಕೆಯಾಗಿರುವಂತೆ ವಿವಿಧ ಸಾಲ ಮೂಲಗಳಿಂದ 522 ಕೋಟಿ ರುಪಾಯಿ ಹಾಗೂ ಕೇಂದ್ರ ಸರ್ಕಾರದ ನಿವ್ವಳ ಸಾಲದ ರೂಪದಲ್ಲಿ 2,931.50 ಕೋಟಿ ರುಪಾಯಿಯನ್ನು ಸಂಗ್ರಹಿಸುವುದು ಈ ಆಯವ್ಯಯದ ಗುರಿ. ವಿವಿಧ ಮೂಲಗಳಿಂದ ಈ ಬಾರಿ 67.66 ಕೋಟಿ ರುಪಾಯಿಯಷ್ಟು ಹೆಚ್ಚು ಆದಾಯ ಬರಲಿದೆ ಎಂದು ಕೃಷ್ಣ ಹೇಳಿದರು.
(ಪಿಟಿಐ)
ಮುಖಪುಟ / ಕೃಷ್ಣಗಾರುಡಿ
Comments
Story first published: Friday, March 21, 2003, 5:30 [IST]