ಚಪ್ಪಲಿ ಮೇಲೆ ಸಚಿನ್ ತೆಂಡೂಲ್ಕರ್ ಭಾವಚಿತ್ರ !
ಮೈಸೂರು : ದೆಹಲಿ ಮೂಲದ ಕಂಪನಿಯಾಂದು ತಾನು ತಯಾರಿಸಿರುವ ಚಪ್ಪಲಿಗಳ ಮೇಲೆ ಭಾರತ ಕ್ರಿಕೆಟ್ ತಂಡದ ಸೂಪರ್ ಸ್ಟಾರ್ ಸಚಿನ್ ತೆಂಡೂಲ್ಕರ್ ಭಾವಚಿತ್ರ ಮುದ್ರಿಸಿರುವುದರ ವಿರುದ್ಧ ಕರ್ನಾಟಕ ಪ್ರದೇಶ ದಲಿತ ಜಾಗೃತ ಸಮಿತಿ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಮೈಸೂರಿನ ಪ್ರಭಾ ಚಿತ್ರಮಂದಿರದ ಬಳಿಯ ಚಪ್ಪಲಿ ಅಂಗಡಿಯಾಂದರಲ್ಲಿ ತೆಂಡೂಲ್ಕರ್ ಚಿತ್ರವನ್ನು ಹೊಂದಿರುವ ಚಪ್ಪಲಿಗಳನ್ನು ಪತ್ತೆ ಹಚ್ಚಿರುವ ದಲಿತ ಜಾಗೃತ ಸಮಿತಿ ಕಾರ್ಯಕರ್ತರು, ಈ ಚಪ್ಪಲಿಗಳನ್ನು ಮಾರಾಟ ಮಾಡದಂತೆ ಅಂಗಡಿ ಮಾಲೀಕನಿಗೆ ತಾಕೀತು ಮಾಡಿದ್ದಾರೆ.
ಸಚಿನ್ ಭಾವಚಿತ್ರಗಳ ಚಪ್ಪಲಿ ಮಾರಾಟದ ವಿರುದ್ಧ ಕ್ರಮ ಕೈಗೊಳ್ಳುವಂತೆ ಮೈಸೂರು ನಗರ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿದ ಸಮಿತಿಯ ಪದಾಧಿಕಾರಿಗಳು ಮನವಿ ಪತ್ರ ಸಲ್ಲಿಸಿದ್ದಾರೆ.
ಚಪ್ಪಲಿಗಳ ಮೇಲೆ ಭಾವಚಿತ್ರ ಮುದ್ರಿಸಿರುವುದು ವಿಶ್ವ ಕ್ರಿಕೆಟ್ಟಿನ ಧ್ರುವತಾರೆಗೆ ಮಾಡಿದ ಅವಮಾನ. ಇಂಥ ಕೀಳು ಅಭಿರುಚಿಯ ವಾಣಿಜ್ಯ ತಂತ್ರ ಬಳಸಿರುವ ಚಪ್ಪಲಿ ಕಂಪನಿಯ ಮಾಲೀಕನನ್ನು ಬಂಧಿಸಬೇಕು ಎಂದು ದಲಿತ ಜಾಗೃತ ಸಮಿತಿಯ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...