‘ಅನಾಥ ಬೀದಿನಾಯಿಗಳನ್ನು ನಿರ್ದಾಕ್ಷಿಣ್ಯವಾಗಿ ಕೊಲ್ಲಿ ’
ಬೆಂಗಳೂರು : ಬೀದಿ ನಾಯಿಗಳ ಕಾಟ ತಪ್ಪಿಸುವಲ್ಲಿ ವಿಫಲರಾದ ಅಧಿಕಾರಿಗಳನ್ನು ಲೋಕಾಯುಕ್ತ ಎನ್.ವೆಂಕಟಾಚಲ ತರಾಟೆಗೆ ತೆಗೆದುಕೊಂಡಿದ್ದು, ಅವುಗಳನ್ನು ನಿರ್ದಾಕ್ಷಿಣ್ಯವಾಗಿ ಕೊಲ್ಲುವಂತೆ ಬೆಂಗಳೂರು ಮಹಾನಗರ ಪಾಲಿಕೆಗೆ ತಾಕೀತು ಮಾಡಿದ್ದಾರೆ.
ಬೀದಿ
ನಾಯಿ
ಮುಕ್ತ
ಬೆಂಗಳೂರು
ಸಂಸ್ಥೆಯ
ಧನಂಜಯ
ಸಲ್ಲಿಸಿದ್ದ
ಅರ್ಜಿಯ
ವಿಚಾರಣೆ
ಮಾಡಿ,
65
ಪುಟಗಳ
ತೀರ್ಪು
ಕೊಟ್ಟ
ವೆಂಕಟಾಚಲ
ಹೇಳಿದ್ದಿಷ್ಟು-
‘ಬೀದಿನಾಯಿ
ನಿಯಂತ್ರಣದ
ವಿಷಯವನ್ನು
ಅಧಿಕಾರಿಗಳು
ಲಘುವಾಗಿ
ಪರಿಗಣಿಸಿರುವುದು
ಸ್ಪಷ್ಟ.
ಕಾರಲ್ಲಿ
ಓಡಾಡುವ
ಅವರಿಗೆ
ಫುಟ್ಪಾತಿನ
ಮೇಲೆ
ಮಲಗುವ,
ಕೊಳಗೇರಿಗಳಲ್ಲಿ
ವಾಸಿಸುವ
ಬಡವರು
ನಾಯಿ
ಕಡಿತದಿಂದ
ಅನುಭವಿಸುವ
ಯಾತನೆ
ಗೊತ್ತಾಗುವುದಿಲ್ಲ.
ರೇಬಿಸ್
ಪೀಡಿತ
ನಾಯಿ
ಕಚ್ಚಿ
ಸಾಯುತ್ತಿರುವವರ
ಪೈಕಿ
ಬಡವರೇ
ಹೆಚ್ಚು.
ಪ್ರಾಣಿಗಳ
ಜನನ
ಪ್ರಮಾಣ
ನಿಯಂತ್ರಿಸಲು
ಇರುವ
ಸಂಸ್ಥೆಗಳನ್ನು
ಹೆಚ್ಚಿಸುವ
ಅಗತ್ಯವಿಲ್ಲ.
ಆಗಸ್ಟ್
9,
2002ರಲ್ಲಿ
ಪಾಲಿಕೆ
ಅಂಗೀಕರಿಸಿರುವ
ರೇಬಿಸ್
ನಿಯಂತ್ರಣದ
ಠರಾವನ್ನೂ
ರದ್ದು
ಪಡಿಸಿದ್ದೇನೆ.
ನಾಯಿಗಳನ್ನು
‘ಲೆಥಾಲ್
ಚೇಂಬರ್’ಳಲ್ಲಿ
ಕೊಲ್ಲುವುದರಿಂದ
1960ರ
ಪ್ರಾಣಿ
ಕಾಯ್ದೆ
ಏನೂ
ಉಲ್ಲಂಘನೆಯಾಗುವುದಿಲ್ಲ.
ಜೀವಕ್ಕೆ
ಹಾನಿ
ಮಾಡುವ
ನಾಯಿಗಳು
ಬದುಕಿರಲು
ಅರ್ಹವಲ್ಲ.
‘ದೆಹಲಿ ಸೇರಿದಂತೆ ಪ್ರಮುಖ ನಗರಗಳಲ್ಲಿ ನಾಯಿಗಳ ಹಾವಳಿ ಹೆಚ್ಚಾಗಲು ರಾಜಕಾರಣಿಗಳ ಮತ್ತು ಅಧಿಕಾರಿಶಾಹಿಗಳ ಉಡಾಫೆ ಧೋರಣೆಯೇ ಕಾರಣವಾಗಿದೆ’.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...