ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾರ್ಚ್‌ 16ರಂದು ಮೈಸೂರಲ್ಲಿ ಕಾರಂತ ನೆನಕೆ

By Staff
|
Google Oneindia Kannada News

ಮೈಸೂರು : ಮಾರ್ಚ್‌ 16ನೇ ತಾರೀಕು ವೈಣಿಕ ಗಾನಭಾರತಿ ವೀಣೆ ಶೇಷಣ್ಣ ಭವನದಲ್ಲಿ ‘ಮತ್ತೆ ನೆನೆಯೋಣ ಕಾರಂತರ’ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮ ಏರ್ಪಾಟಾಗಿದೆ. ಮೈಸೂರು, ವಿ.ವಿ.ಪುರಂನ ಸಿರಿಗನ್ನಡ ವೇದಿಕೆಯ ಉದ್ಘಾಟನಾ ಸಂದರ್ಭದಲ್ಲಿ ಈ ಉಪನ್ಯಾಸ ನಡೆಯಲಿದೆ.

ಕೇಂದ್ರ ಸಚಿವ ವಿ. ಶ್ರೀನಿವಾಸ ಪ್ರಸಾದ್‌ ಸಿರಿಗನ್ನಡ ವೇದಿಕೆಯನ್ನು ಉದ್ಘಾಟಿಸಲಿದ್ದಾರೆ. ಎಚ್ಚೆಸ್ಕೆ ಎಂದೇ ಗುರುತಿಸಿಕೊಂಡಿರುವ ಅಂಕಣಕಾರ ಹಾಗೂ ಹಿರಿಯ ಪತ್ರಕರ್ತ ಪ್ರೊ. ಎಚ್‌.ಎಸ್‌. ಕೃಷ್ಣಸ್ವಾಮಿ ಅಯ್ಯಂಗಾರ್‌ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಕವಿ ಡಾ.ದ್ವಾರಕನಾಥ ಎಚ್‌. ಕಬಾಡಿ, ಕವಿ ಹಾಗೂ ವಿಮರ್ಶಕ ಕೆ.ಸಿ.ಶಿವಪ್ಪ , ಭಾರತರತ್ನ ಸರ್‌ಎಂ.ವಿಶ್ವೇಶ್ವರಯ್ಯ ಎಂಜಿನಿಯರಿಂಗ್‌ ಪ್ರತಿಷ್ಠಾನದ ರಮೇಶ್‌ ಸುರ್ವೆ, ಲೇಖಕಿ ಮಂಗಳಾ ಸತ್ಯನ್‌, ಅಂಕಣಕಾರ ಪ್ರೊ. ಕೆ. ಭೈರವಮೂರ್ತಿ, ವೇದಿಕೆಯ ಅಧ್ಯಕ್ಷ ಎಂ.ಎನ್‌. ವೆಂಕಟರಾಮಯ್ಯ ಮೊದಲಾದವರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

‘ಮತ್ತೆ ನೆನೆಯೋಣ ಕಾರಂತರ’ ಉಪನ್ಯಾಸ ಕಾರ್ಯಕ್ರಮದಲ್ಲಿ ಮೈಸೂರು ಆಕಾಶವಾಣಿಯ ವಸಂತ್‌ಕುಮಾರ್‌ ಪೆರ್ಲ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಸಿರಿಗನ್ನಡ ವೇದಿಕೆಯ ಸದಸ್ಯ ಕವಿ/ ಕವಯತ್ರಿಯರಿಂದ ಕವಿಗೋಷ್ಠಿಯನ್ನೂ ಆಯೋಜಿಸಲಾಗಿದೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X