ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೀರ್ಥ ಹಳ್ಳಿ ತಾ.ಪಂಚಾಯತ್‌ ಉಪಾಧ್ಯಕ್ಷರ ಕೊಲೆ

By Staff
|
Google Oneindia Kannada News

ಶಿವಮೊಗ್ಗ : ಸೋಮವಾರ ರಾತ್ರಿ ಇಲ್ಲಿನ ಕಮ್ಮರಡಿಯಲ್ಲಿ ನಡೆದ ಸಮಾರಂಭದ ವೇಳೆ ತೀರ್ಥ ಹಳ್ಳಿ ತಾಲ್ಲೂಕು ಪಂಚಾಯ್ತಿಯ ಉಪಾಧ್ಯಕ್ಷರನ್ನು ಇರಿದು ಕೊಲ್ಲಲಾಗಿದೆ.

ಉಪಾಧ್ಯಕ್ಷ ಹೊಸ ಹಳ್ಳಿ ವೆಂಕಟೇಶ್‌ ಅವರು ಕಮ್ಮರಡಿಯ ಶಾಲೆಯಾಂದರ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ರಾತ್ರಿ ಎಂಟೂಮುಕ್ಕಾಲರ ಹೊತ್ತಿಗೆ ವೆಂಕಟೇಶ್‌ಗೆ ದೂರವಾಣಿ ಕರೆ ಬಂದಾಗ ಅವರು ಸಮಾರಂಭದಿಂದ ಎದ್ದು ಹೊರ ನಡೆದರು. ಆ ಸಮಯದಲ್ಲಿ ಬಿಳಿ ಮಾರುತಿ- 800 ಕಾರಿನಲ್ಲಿ ಬಂದ ದುಷ್ಕರ್ಮಿಗಳು ವೆಂಕಟೇಶ್‌ ಅವರನ್ನು ಚಾಕುವಿನಿಂದ ತಿವಿದು ಪರಾರಿಯಾಗಿದ್ದಾರೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.

ಈ ಕೊಲೆಗೆ ವೈಯಕ್ತಿಕ ದ್ವೇಷವೇ ಕಾರಣ ಎಂದು ಶಂಕಿಸಲಾಗಿದೆ. ಹಿರಿಯ ಪೊಲೀಸ್‌ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X