ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಗಾಂಧಿ ಸಾಹಿತ್ಯಸಂಘದಿ ಫೆ.23ರಂದು ‘ಮಧುರ ಸ್ಮೃತಿ’
ಬೆಂಗಳೂರು : ಪ್ರೊ.ಬಿ.ರಾಮಸ್ವಾಮಿ ಸಂಸ್ಮರಣ ಸಂಪುಟ ‘ಮಧುರ ಸ್ಮೃತಿ’ ಫೆ.23ರ ಭಾನುವಾರ ಮಲ್ಲೇಶ್ವರಂನ ಗಾಂಧಿ ಸಾಹಿತ್ಯ ಸಂಘದಲ್ಲಿ ನಡೆಯುವ ಸಮಾರಂಭದಲ್ಲಿ ಬಿಡುಗಡೆಯಾಗಲಿದೆ.
ನಿವೃತ್ತ ನ್ಯಾಯಮೂರ್ತಿ ನಿಟ್ಟೂರು ಶ್ರೀನಿವಾಸರಾವ್ ಅವರು ಪುಸ್ತಕ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸುವರು. ಡಾ.ಜಿ.ಎಸ್.ದೀಕ್ಷಿತ್ ಅವರು ಪುಸ್ತಕವನ್ನು ಬಿಡುಗಡೆ ಮಾಡುವರು. ಪ್ರೊ.ಬಿ.ರಾಮಸ್ವಾಮಿ ಸಂಸ್ಮರಣ ಸಂಪುಟ ಸಮಿತಿ ಮತ್ತು ಗಾಂಧಿಸಾಹಿತ್ಯ ಸಂಘದ ಸಹಯೋಗದಲ್ಲಿ ಬಿ.ಎಂ.ಶ್ರೀ. ಸ್ಮಾರಕ ಪ್ರತಿಷ್ಠಾನ ಈ ಕಾರ್ಯಕ್ರಮವನ್ನು ಏರ್ಪಡಿಸಿದೆ.
ಪ್ರೊ.ಗರ್ಗೇಶ್ವರಿ ವೆಂಕಟಸುಬ್ಬಯ್ಯ, ಡಿ.ಎ.ಆಚಾರ್ಯ, ಪ್ರೊ.ಬಿ.ಆರ್.ಸುರಪುರ, ಚಂದ್ರಾವತಿ ರಾಮಚಂದ್ರ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸುವರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...
Comments
Story first published: Friday, February 21, 2003, 5:30 [IST]