ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ಕೃಷ್ಣನೂರಿನ ತುಪ್ಪ

By Staff
|
Google Oneindia Kannada News

ಉಡುಪಿ : ಕೃಷ್ಣನೂರಿನ ಆಸುಪಾಸಿನ 28 ಸಾವಿರ ಕುಟುಂಬಗಳ ತುತ್ತಿನ ಚೀಲ ತುಂಬಲು ತಿರುಪತಿ ತಿಮ್ಮಪ್ಪನೂ ಸೇರಿದಂತೆ ಹಲವು ದೇವರುಗಳ ಕೃಪೆಯೇ ಕಾರಣವಾಗಿದೆ.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಬಹುತೇಕ ದೇಗುಲಗಳಿಗೆ ತುಪ್ಪ ಒದಗಿಸುವ ದಕ್ಷಿಣ ಕನ್ನಡ ಹಾಲು ಉತ್ಪಾದಕರ ಸಂಘದ ಚಾಲಾಕಿತನ 28 ಸಾವಿರ ಕುಟುಂಬಗಳನ್ನು ಕಾಪಾಡುತ್ತಿದೆ. ರಾಜ್ಯದ ಬಹುತೇಕ ಹಾಲು ಉತ್ಪಾದಕರ ಒಕ್ಕೂಟಗಳು ಸೊರಗಿ ಹೋಗಿ, ಬಾಗಿಲು ಮುಚ್ಚುವ ಯೋಚನೆ ಮಾಡುತ್ತಿರುವ ಇವತ್ತಿನ ಪರಿಸ್ಥಿತಿಯಲ್ಲಿ ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದ ನಡೆಯನ್ನು ಮೆಚ್ಚಲೇಬೇಕು. ಕಳೆದ ವರ್ಷ ಪ್ರತಿನಿತ್ಯ 1 ಲಕ್ಷ ಲೀಟರ್‌ ಹಾಲು ಮಾರಿದ ದಾಖಲೆ ಹೊಂದಿರುವ ಒಕ್ಕೂಟ ಈ ವರ್ಷ ನಿತ್ಯವೂ 1.3 ಲಕ್ಷ ಲೀಟರ್‌ ಹಾಲು ಬಿಕರಿ ಮಾಡುತ್ತಿದೆ.

ಒಕ್ಕೂಟದ ಸೂರಿನಡಿ 403 ಹಾಲು ಉತ್ಪಾದಕ ಸಹಕಾರಿ ಸಂಘಗಳು ಕೆಲಸ ಮಾಡುತ್ತಿವೆ. ಹಾಲು ಹಾಕುವುದನ್ನೇ ಪ್ರಮುಖ ಕಾಯಕವಾಗುಳ್ಳ 28 ಸಾವಿರ ಕುಟುಂಬಗಳದ್ದು ಈಗ ನೆಮ್ಮದಿಯ ಜೀವನ. ಇತರೆ ಕಾಯಕ ಮಾಡುತ್ತಿರುವ ಉಡುಪಿ ಜಿಲ್ಲೆಯ ಕುಟುಂಬಗಳೂ ಹೈನುಗಾರಿಕೆಯತ್ತ ಒಲವು ತೋರುತ್ತಿರುವುದಕ್ಕೆ ಒಕ್ಕೂಟದ ಭೀಮನಡೆಯೇ ಕಾರಣ.

ಒಕ್ಕೂಟದ ಹಾಲಿನ ವಿಚಾರ ಬಿಟ್ಟು ನೋಡಿ. ಇದು ಪ್ರತಿ ತಿಂಗಳು 48 ಟನ್‌ ತುಪ್ಪ ಮಾರಾಟ ಮಾಡುತ್ತಿದೆ. 6,500 ಕಿಲೋ ಮೈಸೂರು ಪಾಕ್‌ ಹಾಗೂ ಪೇಡ ಬಿಕರಿಯಾಗುತ್ತಿದೆ.

ಇಂತಿಪ್ಪ ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟಕ್ಕೆ ಈಗ ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ತುಪ್ಪ ಒದಗಿಸುವ ಆರ್ಡರು ಬಂದಿದೆ. ಈ ನಿಟ್ಟಿನಲ್ಲಿ ಆಗಿರುವ ಒಪ್ಪಂದದಂತೆ ಒಕ್ಕೂಟ ಪ್ರತಿ ತಿಂಗಳು ತಿರುಪತಿಗೆ 10 ಟನ್‌ ತುಪ್ಪ ಪೂರೈಸಲಿದೆ ಎಂದು ಒಕ್ಕೂಟದ ಅಧ್ಯಕ್ಷ ದಿವಾಕರ್‌ ಶೆಟ್ಟಿ ನಗುನಗುತ್ತಾ ಹೇಳಿದರು. ಈ ಮೂಲಕ ಒಕ್ಕೂಟದ ತಿಂಗಳ ತುಪ್ಪ ಮಾರಾಟದ ಪ್ರಮಾಣ 48ರಿಂದ 58 ಟನ್‌ಗೆ ಏರಿದೆ.

(ಪಿಟಿಐ)

ಮುಖಪುಟ / ಲೋಕೋಭಿನ್ನರುಚಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X