ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಡುಪಿಗೆ ಬರುವರು ಕಪಿಲ್‌ದೇವ್‌ ‘ಬಾಸ್‌’ಗಾಗಿ !

By Staff
|
Google Oneindia Kannada News

Kapildevಉಡುಪಿ: ಫೆಬ್ರವರಿ 19ರ ಬುಧವಾರ ‘ಶತಮಾನದ ಶ್ರೇಷ್ಠ ಕ್ರಿಕೆಟಿಗ’ ವಿಸ್ಡನ್‌ ಪ್ರಶಸ್ತಿ ಪುರಸ್ಕೃತ ಕಪಿಲ್‌ದೇವ್‌ ಉಡುಪಿಗೆ ಭೇಟಿ ಕೊಡುವರು.

ಭಾರತ ತಂಡ ವಿಶ್ವಕಪ್‌ ಗೆಲ್ಲಲಿ ಎಂದು ಶ್ರೀಕೃಷ್ಣನ ಪ್ರಾರ್ಥಿಸಲಿಕ್ಕಾಗಿ ಕಪಿಲ್‌ ಉಡುಪಿಗೆ ಬರುತ್ತಿಲ್ಲ . ಅಸಲಿಗೆ ಕಪಿಲ್‌ರ ಈ ಉಡುಪಿ ಯಾತ್ರೆಗೂ ಕ್ರಿಕೆಟ್ಟಿಗೂ ಎತ್ತಣ ಸಂಬಂಧವೂ ಇಲ್ಲ . ಈ ಯಾತ್ರೆಗೆ ಧಾರ್ಮಿಕ-ಆಧ್ಯಾತ್ಮಿಕ ಉದ್ದೇಶವೂ ಇಲ್ಲ . ಕಪಿಲ್‌ ಉಡುಪಿಗೆ ಬರುತ್ತಿರುವುದು ಅಪ್ಪಟ ವ್ಯಾಪಾರಿ ಕಾರಣಕ್ಕಾಗಿ.

ಕಪಿಲ್‌ ಉಡುಪಿಯ ಶ್ರೀಕೃಷ್ಣನ ಮಂದಿರಕ್ಕೆ ಭೇಟಿ ನೀಡುವರೋ ಇಲ್ಲವೋ ಗೊತ್ತಿಲ್ಲ , ಉಡುಪಿಯ ಕೈನೆಟಿಕ್‌ ದ್ವಿಚಕ್ರ ವಾಹನಗಳ ಅಧಿಕೃತ ಶೋರೂಂ ‘ಪೂಜಾ ಮೋಟಾರ್ಸ್‌’ಗೆ ಭೇಟಿ ಕೊಡುವ ಕಾರ್ಯಕ್ರಮವಂತೂ ನಿಗದಿಯಾಗಿದೆ. ಪೂಜಾ ಮೋಟಾರ್ಸ್‌ಗೆ ಭೇಟಿ ನೀಡುವ ಕಾರಣಕ್ಕಾಗಿಯೇ ಕಪಿಲ್‌ ಉಡುಪಿಗೆ ಬರುತ್ತಿದ್ದಾರೆ.

ಫೆ.19 ರಂದು ಪೂಜಾ ಮೋಟಾರ್ಸ್‌ನಲ್ಲಿ ಕೈನೆಟಿಕ್‌ ‘ಬಾಸ್‌’ ಮೋಟಾರ್‌ ಬೈಕ್‌ ಖರೀದಿಸಿದವರಿಗೆ ಕಪಿಲ್‌ ಜೊತೆ ಮಾತನಾಡುವ ಯೋಗ. ‘ಬಾಸ್‌’ ಖರೀದಿದಾರರಿಗೆ ಅಂದು ಕಪಿಲ್‌ದೇವ್‌ ದ್ವಿಚಕ್ರ ವಾಹನವನ್ನು ಸ್ವತಃ ಹಸ್ತಾಂತರಿಸುವರು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X