ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾರ್ಚ್‌ನಿಂದ ಬೆಂಗಳೂರು-ಮೈಸೂರು ಚತುಷ್ಪಥ ಕಾಮಗಾರಿ

By Staff
|
Google Oneindia Kannada News

ಬೆಂಗಳೂರು : ಬೆಂಗಳೂರು- ಮೈಸೂರು ನಡುವೆ ಚತುಷ್ಪಥ ರಸ್ತೆ ಕಾಮಗಾರಿ ಮಾರ್ಚ್‌ ತಿಂಗಳಲ್ಲಿ ಪ್ರಾರಂಭವಾಗಲಿದೆ ಎಂದು ಲೋಕೋಪಯೋಗಿ ಸಚಿವ ಧರ್ಮಸಿಂಗ್‌ ಗುರುವಾರ(ಫೆ.13) ಹೇಳಿದರು.

ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಭಾಗವಹಿಸಿದ ನಂತರ ಸಚಿವರು ಸುದ್ದಿಗಾರರೊಡನೆ ಮಾತಾಡಿದರು. ಬೆಂಗಳೂರು- ಮೈಸೂರು ನಡುವೆ ನಾಲ್ಕು ರಸ್ತೆಗಳ ಕಾಮಗಾರಿಯ ಮೊದಲ ಹಂತದಲ್ಲಿ 62 ಕಿ.ಮೀ. ಉದ್ದದ ರಸ್ತೆಗಳನ್ನು ನಿರ್ಮಿಸಲಾಗುವುದು. ಈ ಕೆಲಸ ಮುಂದಿನ ತಿಂಗಳಿಂದ ಪ್ರಾರಂಭವಾಗುತ್ತದೆ ಎಂದರು.

ಬೆಂಗಳೂರಿನಿಂದ ಹೆಜ್ಜಾಲ ಮತ್ತು ಮದ್ದೂರು ಬಳಿಯ ನಿಡಘಟ್ಟದಿಂದ ಹೆಜ್ಜಾಲದವರೆಗೆ ಏಕಕಾಲದಲ್ಲಿ ರಸ್ತೆ ಕಾಮಗಾರಿ ನಡೆಯಲಿದ್ದು, 18 ತಿಂಗಳಲ್ಲಿ ಮೊದಲ ಹಂತದ ಕೆಲಸ ಪೂರೈಸಲಿದೆ. ಇದಕ್ಕೆ ಒಟ್ಟು 188 ಕೋಟಿ ರುಪಾಯಿ ಖರ್ಚಾಗಲಿದೆ.

ಪ್ರಸಕ್ತದ 150 ಕೋಟಿ ರುಪಾಯಿಯಿಂದ 200 ಕೋಟಿ ರುಪಾಯಿವರೆಗೆ ಸಾಲವನ್ನು ಎತ್ತಲು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮಕ್ಕೆ ಕರ್ನಾಟಕ ಸರ್ಕಾರ ಗ್ಯಾರಂಟಿ ಕೊಡಬೇಕು ಎಂದು ಉನ್ನತ ಮಟ್ಟದ ಸಭೆಯಲ್ಲಿ ನಿರ್ಧರಿಸಲಾಯಿತು ಎಂದು ಧರ್ಮಸಿಂಗ್‌ ತಿಳಿಸಿದರು.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X