ಪ್ಲೇವಿನ್ ಲಾಟರಿ ನಿಷೇಧಕ್ಕೆ ಶಾಸಕ ಸ್ಬುಬಾರೆಡ್ಡಿ ಆಗ್ರಹ
ಬೆಂಗಳೂರು : ಯುವಜನತೆ ಹಾಗೂ ಕೆಳ-ಮಧ್ಯಮ ವರ್ಗದ ಹಿತಾಸಕ್ತಿಯನ್ನು ರಕ್ಷಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪ್ಲೇವಿನ್ ಆನ್ಲೈನ್ ಲಾಟರಿಯನ್ನು ತಕ್ಷಣದಿಂದಲೇ ನಿಷೇಧಿಸಬೇಕೆಂದು ಶಾಸಕ ಕೆ.ಎನ್.ಸುಬ್ಬಾರೆಡ್ಡಿ ಒತ್ತಾಯಿಸಿದ್ದಾರೆ.
ಪ್ಲೇವಿನ್ ಲಾಟರಿಯಿಂದ ಕೆಳ ಹಾಗೂ ಮಧ್ಯಮ ವರ್ಗದ ಕುಟುಂಬಗಳು ಬೀದಿಪಾಲಾಗುತ್ತಿವೆ. ಕೂಲಿಕಾರರು ಕೂಡ ಪ್ಲೇವಿನ್ ಭೂತಕ್ಕೆ ಬಲಿಯಾಗುತ್ತಿದ್ದಾರೆ. ಆ ಕಾರಣದಿಂದಾಗಿ ಪ್ಲೇವಿನ್ ಲಾಟರಿಯನ್ನು ಸರ್ಕಾರ ನಿಷೇಧಿಸಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಸುಬ್ಬಾರೆಡ್ಡಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ಪ್ಲೇವಿನ್ ಲಾಟರಿಯ ದುಷ್ಪರಿಣಾಮಗಳನ್ನು ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಅವರ ಗಮನಕ್ಕೆ ತರಲಾಗಿದೆ. ಪ್ಲೇವಿನ್ ಲಾಟರಿಯನ್ನು ನಿಷೇಧಿಸುವಂತೆಯೂ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದರು.
ನಿರುದ್ಯೋಗ ಮತ್ತು ಬಡತನದ ದುರುಪಯೋಗ ಪಡೆದು ಜನರನ್ನು ದಿಢೀರ್ ಶ್ರೀಮಂತರನ್ನಾಗಿಸುವ ಹಗಲುಗನಸನ್ನು ಪ್ಲೇವಿನ್ ಬಿತ್ತುತ್ತಿದೆ ಎಂದು ಸುಬ್ಬಾರೆಡ್ಡಿ ಆಪಾದಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...