ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಖಾಸಗೀಕರಣದತ್ತ ಪ್ರೇಮಿಗಳ ಕಾಶ್ಮೀರ ಬೃಂದಾವನ
ಬೆಂಗಳೂರು : ಕೃಷ್ಣ ರಾಜ ಸಾಗರ ಅಣೆಕಟ್ಟಿನ ಬಗಲಲ್ಲಿರುವ ಜಗದ್ವಿಖ್ಯಾತ ಬೃಂದಾವನ ಉದ್ಯಾನವನ್ನು ಸದ್ಯದಲ್ಲೇ ಖಾಸಗೀಕರಣಗೊಳಿಸಲು ಸರ್ಕಾರ ನಿರ್ಧರಿಸಿದೆ. ನಿರ್ಮಾಣ, ನಿರ್ವಹಣೆ ಮತ್ತು ಹಸ್ತಾಂತರ ಆಧಾರದ ಮೇಲೆ ಈ ಖಾಸಗೀಕರಣ ಪ್ರಕ್ರಿಯೆ ನಡೆಯಲಿದೆ.
ಪ್ರವಾಸೋದ್ಯಮ ಇಲಾಖೆಯ ಆಯುಕ್ತ ಐ.ಎಂ.ವಿಠ್ಠಲಮೂರ್ತಿ ಸೋಮವಾರ (ಫೆ.10) ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.
ಈ ಹಿಂದೆ ನೀರಾವರಿ ಇಲಾಖೆಯ ವ್ಯಾಪ್ತಿಗೆ ಸೇರಿದ್ದ ಬೃಂದಾವನದ ಉಸ್ತುವಾರಿಕೆ ಈಗ ಪ್ರವಾಸೋದ್ಯಮ ಇಲಾಖೆಗೆ ಸೇರಿದೆ. ಕರ್ನಾಟಕ ಸರ್ಕಾರಕ್ಕೆ ಸೇರಿರುವ 26 ಪ್ರವಾಸಿ ತಾಣ ಅಥವಾ ಸ್ವತ್ತುಗಳನ್ನು ಖಾಸಗೀಕರಣಗೊಳಿಸಲು ಸರ್ಕಾರ ತೀರ್ಮಾನಿಸಿದೆ. ಈ ಪೈಕಿ ನಾಲ್ಕರ ಪರವಾನಗಿಯನ್ನು ಖಾಸಗಿಯವರಿಗೆ ಈಗಾಗಲೇ ಕೊಡಲಾಗಿದೆ ಎಂದು ವಿಠ್ಠಲಮೂರ್ತಿ ಹೇಳಿದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...
Comments
Story first published: Tuesday, February 11, 2003, 5:30 [IST]