For Daily Alerts
ಭಟ್ಕಳ : ಕಾಣದಂತೆ ಮಾಯವಾದ ಶ್ರೀಲಕ್ಷ್ಮಿ ವೆಂಕಟೇಶ್ವರ
ಮಂಗಳೂರು : ಇಲ್ಲಿಗೆ 160 ಕಿಮೀ ದೂರದ ಭಟ್ಕಳದಲ್ಲಿನ ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಾಲಯದಲ್ಲಿ 19 ಪುರಾತನ ಪಂಚಲೋಹ ವಿಗ್ರಹಗಳು ಕಳುವಾಗಿವೆ.
ಕಳುವಾದ ಕೆಲವು ವಿಗ್ರಹಗಳು 500 ವರ್ಷಗಳಷ್ಟು ಹಳೆಯದಾಗಿದ್ದು , ಈ ವಿಗ್ರಹಗಳು ಕಾಶಿಮಠಕ್ಕೆ ಸಂಬಂಧಿಸಿವೆ. ದೇಗುಲದ ಪ್ರಧಾನ ಮೂರ್ತಿಯಾದ ಲಕ್ಷ್ಮಿ ವೆಂಕಟೇಶ್ವರ ವಿಗ್ರಹ ಕೂಡ ಕಳುವಾಗಿದೆ. ಫೆ.10 ರ ಸೋಮವಾರ ಈ ವಿಗ್ರಹ ಕಳವು ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳುವಾದ ವಿಗ್ರಹಗಳ ಮೌಲ್ಯವನ್ನು ಅಂದಾಜು ಮಾಡಲಾಗುತ್ತಿದೆ. ವಿಗ್ರಹಗಳ ಕಳವಿನಲ್ಲಿ ಸ್ಥಳೀಯರ ಕೈವಾಡ ಇರಬಹುದೆಂದು ಪೊಲೀಸರು ಶಂಕಿಸಿದ್ದಾರೆ.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...
Story first published: Tuesday, February 11, 2003, 5:30 [IST]