ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಟ್ಕಳ : ಕಾಣದಂತೆ ಮಾಯವಾದ ಶ್ರೀಲಕ್ಷ್ಮಿ ವೆಂಕಟೇಶ್ವರ

By Staff
|
Google Oneindia Kannada News

ಮಂಗಳೂರು : ಇಲ್ಲಿಗೆ 160 ಕಿಮೀ ದೂರದ ಭಟ್ಕಳದಲ್ಲಿನ ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಾಲಯದಲ್ಲಿ 19 ಪುರಾತನ ಪಂಚಲೋಹ ವಿಗ್ರಹಗಳು ಕಳುವಾಗಿವೆ.

ಕಳುವಾದ ಕೆಲವು ವಿಗ್ರಹಗಳು 500 ವರ್ಷಗಳಷ್ಟು ಹಳೆಯದಾಗಿದ್ದು , ಈ ವಿಗ್ರಹಗಳು ಕಾಶಿಮಠಕ್ಕೆ ಸಂಬಂಧಿಸಿವೆ. ದೇಗುಲದ ಪ್ರಧಾನ ಮೂರ್ತಿಯಾದ ಲಕ್ಷ್ಮಿ ವೆಂಕಟೇಶ್ವರ ವಿಗ್ರಹ ಕೂಡ ಕಳುವಾಗಿದೆ. ಫೆ.10 ರ ಸೋಮವಾರ ಈ ವಿಗ್ರಹ ಕಳವು ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳುವಾದ ವಿಗ್ರಹಗಳ ಮೌಲ್ಯವನ್ನು ಅಂದಾಜು ಮಾಡಲಾಗುತ್ತಿದೆ. ವಿಗ್ರಹಗಳ ಕಳವಿನಲ್ಲಿ ಸ್ಥಳೀಯರ ಕೈವಾಡ ಇರಬಹುದೆಂದು ಪೊಲೀಸರು ಶಂಕಿಸಿದ್ದಾರೆ.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X