ವಿದೇಶಿ ಗಿರಾಕಿಗಳ ಸೆಳೆಯಲು ಪ್ರವಾಸೋದ್ಯಮಕ್ಕೆ ಬಣ್ಣ
ಬೆಂಗಳೂರು : ದೇಶೀ ಮತ್ತು ವಿದೇಶೀ ಬಂಡವಾಳದಾರರನ್ನು ಆಕರ್ಷಿಸುವ ಸಲುವಾಗಿ ಈ ವರ್ಷ ಅಂತರರಾಷ್ಟ್ರೀಯ ಪ್ರವಾಸೋದ್ಯಮ ಬಂಡವಾಳ ಹೂಡಿಕೆದಾರರ ವಿನಿಮಯ ಕೇಂದ್ರ (ಐಎನ್ಟಿಐಇ) ವನ್ನು ಸ್ಥಾಪಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ರಾಜ್ಯ ಮಾಹಿತಿ ತಂತ್ರಜ್ಞಾನ ಮತ್ತು ಪ್ರವಾಸೋದ್ಯಮ ಸಚಿವ ಡಿ.ಬಿ.ಇನಾಂದಾರ್ ಸೋಮವಾರ (ಫೆ.10) ಸುದ್ದಿಗಾರರಿಗೆ ಈ ನಿರ್ಧಾರ ತಿಳಿಸಿದರು. ಪ್ರವಾಸೋದ್ಯಮ ಕ್ಷೇತ್ರದಲ್ಲಿ ಖಾಸಗಿ ಮತ್ತು ಸಾರ್ವಜನಿಕ ವಲಯದ ಒಡಂಬಡಿಕೆಯ ‘ಕನೆಕ್ಟ್ 2’ ಎಂಬ ಸಮಾವೇಶ ನಡೆಯಲಿದೆ. ಫೆಬ್ರವರಿ 11ರಂದು ನಡೆಯಲಿರುವ ಈ ಸಮಾವೇಶದಲ್ಲಿ ರಾಜ್ಯದ ‘ಚುರುಕಾದ ಮತ್ತು ಪೂರ್ವ ಸಾಂಸ್ಥಿಕ’ ಪ್ರವಾಸೋದ್ಯಮ ನೀತಿಯ ಮುಖ್ಯಾಂಶಗಳನ್ನು ಮಂಡಿಸಲಾಗುವುದು ಎಂದು ಸಚಿವರು ಹೇಳಿದರು.
ಏನಿದು
ಕನೆಕ್ಟ್
?
ಇದೊಂದು
ಸಮಾವೇಶ.
ಇದರಲ್ಲಿ
ಇವತ್ತಿನ
ಪ್ರವಾಸೋದ್ಯಮದ
ನಾಲ್ಕು
ಪ್ರಮುಖ
ವಿಷಯಗಳನ್ನು
ಚರ್ಚಿಸಲಾಗುವುದು.
ಅವೆಂದರೆ-
- ಪ್ರವಾಸೋದ್ಯಮದ ಅಭಿವೃದ್ಧಿಗೆ ತಕ್ಕಂತಹ ಪರಿಸರ ಹುಟ್ಟುಹಾಕುವ ನೀತಿ
- ಪ್ರವಾಸೋದ್ಯಮದಲ್ಲಿ ವೃತ್ತಿಪರ ಬ್ರಾಂಡಿಂಗ್ ಮತ್ತು ಮಾರುಕಟ್ಟೆ ಒದಗಿಸುವಿಕೆ
- ಪಕ್ಕಾ ಮೂಲಭೂತ ಸೌಕರ್ಯಗಳು ಮತ್ತು ಸಮರ್ಪಕ ಸಂಪರ್ಕ
- ಪ್ರವಾಸೋದ್ಯಮದಲ್ಲಿ ಸಾರ್ವಜನಿಕ ವಲಯ ಹಾಗೂ ಖಾಸಗಿ ವಲಯದ ಸಂಬಂಧ ಕುದುರಿಸುವಿಕೆ.
ತೆರೆಯಲಿದೆ ಮನೆ ಓ ಬಾ ಅತಿಥಿ : ಕರ್ನಾಟಕದ ಪ್ರವಾಸಿ ತಾಣಗಳಲ್ಲಿ ತಂಗುಮನೆಗಳನ್ನು ವ್ಯವಸ್ಥೆ ಮಾಡುವ ಯೋಜನೆ ‘ಅತಿಥಿ’. ಮನೆಯ ವಾತಾವರಣದಲ್ಲಿ ಊಟ ಮಾಡುತ್ತಾ, ಇಲ್ಲಿನ ಜನರ ಜೊತೆ ಹರಟೆ ಹೊಡೆಯುತ್ತಾ ಸ್ಥಳೀಯ ವಿಷಯಗಳನ್ನು ತಿಳಿದುಕೊಳ್ಳುವ ಅವಕಾಶ ಪ್ರವಾಸಿಗರಿಗೆ ಈ ಕಾರ್ಯಕ್ರಮದ ಮೂಲಕ ದಕ್ಕಲಿದೆ ಎಂದರು.
ಪ್ರವಾಸೋದ್ಯಮ ಇಲಾಖೆಯ ನೀತಿ ನಿರೂಪಕರು ಹಾಗೂ ಸರ್ಕಾರಿ ಪ್ರತಿನಿಧಿಗಳು ಸೇರಿದಂತೆ ಸುಮಾರು 600 ಅಧಿಕಾರಿಗಳು ಕನೆಕ್ಟ್ ಚಾವಡಿಯಲ್ಲಿ ಕೂರಲಿದ್ದಾರೆ.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...