ಬುಶ್ಗೆ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಶ್ರೀ ಪತ್ರ
ಮೈಸೂರು : ವಿಶ್ವದಲ್ಲಿ ಸಮರ ಭೀತಿ ತಲೆದೋರಿದ್ದು , ಅದನ್ನು ತಡೆಗಟ್ಟಬೇಕೆಂದು ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅಮೆರಿಕಾದ ಅಧ್ಯಕ್ಷ ಜಾರ್ಜ್ ಡಬ್ಲ್ಯು. ಬುಶ್ ಅವರಿಗೆ ಪತ್ರ ಬರೆದಿದ್ದಾರೆ.
ಭಾರತದಲ್ಲಿ ಯಾರೊಬ್ಬರೂ ಯುದ್ಧವನ್ನು ಅಪೇಕ್ಷಿಸುತ್ತಿಲ್ಲ . ಅಮೆರಿಕ ಅಥವಾ ಯುರೋಪ್ ಕೂಡ ಯುದ್ಧವನ್ನು ಬಯಸುವಂತಿಲ್ಲ . ಯುದ್ಧ ಸಂಭವಿಸಿದಲ್ಲಿ ಸಾಮಾಜಿಕ ಸ್ಥಿತಿ ಏರುಪೇರಾಗಿ, ಜನ ಸಾಮಾನ್ಯರ ಜೀವನ ದಾರುಣವಾಗುತ್ತದೆ ಎಂದು ದೇಶಿಕೇಂದ್ರ ಸ್ವಾಮೀಜಿ ಪತ್ರದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.
ಶಸ್ತ್ರಾಸ್ತ್ರಗಳ ನಾಶ ತುರ್ತು ಆದ್ಯತೆಯಾದರೂ ಅದನ್ನು ಬೇರೆಯ ರೀತಿಯಲ್ಲಿ ಪರಿಹರಿಸಬೇಕು. ಮಾನವ ಕುಲಕ್ಕೆ ಮಾರಕವಾದ ಯುದ್ಧವನ್ನು ತಡೆಗಟ್ಟಬೇಕು. ವಿಶ್ವಶಾಂತಿಗಾಗಿ ಯುದ್ಧವನ್ನು ತಡೆಗಟ್ಟಬೇಕು. ಈ ನಿಟ್ಟಿನಲ್ಲಿ ನಿಮ್ಮ ನಾಯಕತ್ವದಲ್ಲಿ ನಮಗೆ ವಿಶ್ವಾಸವಿದೆ ಎಂದು ಸ್ವಾಮೀಜಿ ಬುಶ್ ಅವರಿಗೆ ಪತ್ರದಲ್ಲಿ ತಿಳಿಸಿದ್ದಾರೆ.
ಭಾರತದ ಪ್ರಧಾನಿ ವಾಜಪೇಯಿ ಅವರಿಗೆ ಪತ್ರ ಬರೆದಿರುವ ದೇಶಿಕೇಂದ್ರ ಸ್ವಾಮೀಜಿ ವಿಶ್ವ ಶಾಂತಿಯ ಅಗತ್ಯವನ್ನು ಪ್ರತಿಪಾದಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...