ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಬ್ಬಿಗೆ ನೀರು ಬಿಡದಿದ್ದರೆ ಘೕರಾವ್‌ : ಮಾದೇಗೌಡ

By Staff
|
Google Oneindia Kannada News

ಮೈಸೂರು : ಮೈಸೂರು ಹಾಗೂ ಮಂಡ್ಯ ಜಿಲ್ಲೆಯ ರೈತರು, ಸಾಹಿತಿಗಳು ಮತ್ತು ರಾಜಕಾರಣಿಗಳು ಸುಪ್ರಿಂಕೋರ್ಟ್‌ ಆದೇಶದಂತೆ ತಮಿಳುನಾಡಿಗೆ 4,500 ಕ್ಯೂಸೆಕ್ಸ್‌ ನೀರನ್ನು ಬಿಡುವ ಕ್ರಮವನ್ನು ವಿರೋಧಿಸಿ ಈಗಾಗಲೇ ಸಣ್ಣ ಪ್ರಮಾಣದಲ್ಲಿ ಪ್ರತಿಭಟನೆ ಶುರುವಿಟ್ಟುಕೊಂಡಿದ್ದಾರೆ.

ಕಾವೇರಿ ಹಿತರಕ್ಷಣಾ ಸಮಿತಿ ಮತ್ತು ಕರ್ನಾಟಕ ರಾಜ್ಯ ರೈತ ಸಂಘದ ಚಳವಳಿಕಾರರು, ರಾಜ್ಯವೇ ಬರದಲ್ಲಿ ಬೇಯುತ್ತಿರುವಾಗ ತಮಿಳುನಾಡಿಗೆ ನೀರು ಬಿಡಬೇಕೆಂಬ ಸುಪ್ರಿಂಕೋರ್ಟ್‌ ಆದೇಶ ಅವೈಜ್ಞಾನಿಕ ಹಾಗೂ ದುರದೃಷ್ಟಕರ ಎಂದು ಬಣ್ಣಿಸಿದ್ದಾರೆ.

ಫೆಬ್ರವರಿ 10ನೇ ತಾರೀಕು ನಡೆಯಲಿರುವ ಕಾವೇರಿ ನದಿ ಪ್ರಾಧಿಕಾರದ ಸಭೆಯ ಫಲಶೃತಿಗೆ ಕಾಯುತ್ತೇವೆ. ಪ್ರಾಧಿಕಾರ ಕೊಡುವ ತೀರ್ಪು ರಾಜ್ಯದ ಹಿತರಕ್ಷಣೆಗೆ ಧಕ್ಕೆ ತರುವಂತಿದ್ದರೆ ಚಳವಳಿಯನ್ನು ಮತ್ತೆ ಚುರುಕುಗೊಳಿಸುತ್ತೇವೆ. ಈಗಾಗಲೇ ಮಾತು ಕೊಟ್ಟಿರುವಂತೆ ಫೆಬ್ರವರಿ 15ರೊಳಗೆ ಮುಖ್ಯಮಂತ್ರಿ ಕೃಷ್ಣ 1 ಲಕ್ಷ ಹೆಕ್ಟೇರ್‌ ಜಾಗದ ಕಬ್ಬು ಬೆಳೆಗೆ ನೀರು ಬಿಡಬೇಕು. ಆಗಿರುವ ಬೆಳೆ ನಷ್ಟಕ್ಕೆ ಪರಿಹಾರ ಕಟ್ಟಿಕೊಡಬೇಕು. ಇಲ್ಲವಾದರೆ ಮಂಡ್ಯ ಜಿಲ್ಲೆಗೆ ಭೇಟಿ ಕೊಡಲಿರುವ ಮುಖ್ಯಮಂತ್ರಿ, ಸಚಿವರು ಹಾಗೂ ಶಾಸಕರನ್ನು ಘೕರಾವ್‌ ಮಾಡುತ್ತೇವೆ ಎಂದು ಕಾವೇರಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ.ಮಾದೇಗೌಡ ಧಮಕಿ ಹಾಕಿದ್ದಾರೆ.

ಸುಪ್ರಿಂಕೋರ್ಟ್‌ನ ಹುಚ್ಚು ಆದೇಶದಿಂದ ರಾಜ್ಯದ 85 ಲಕ್ಷ ಮಂದಿಗೆ ಹೊಡೆತ ಬೀಳುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಕೆ.ಎಸ್‌.ಪುಟ್ಟಣ್ಣಯ್ಯ ಹೇಳಿದ್ದಾರೆ.

(ಇನ್ಫೋ ವಾರ್ತೆ )

ಮುಖಪುಟ / ಕಾವೇರಿ ಕನ್ನಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X