ತಮಿಳ್ನಾಡು ಪೊಲೀಸರ ವಶಕ್ಕೆ ನಕ್ಕೀರನ್ ವರದಿಗಾರ
ಚೆನ್ನೈ : 1998 ರಲ್ಲಿ ನರಹಂತಕ ವೀರಪ್ಪನ್ನಿಂದ ಹತ್ಯೆಗೊಳಗಾದ ಯುವಕನೊಬ್ಬನ ಸಾವಿನ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ತಮಿಳುನಾಡು ಪೊಲೀಸರು ನಕ್ಕೀರನ್ ಪತ್ರಿಕೆಯ ಕೊಯಮತ್ತೂರು ಮೂಲದ ವರದಿಗಾರನನ್ನು ಬಂಧಿಸಿದ್ದಾರೆ.
ಮಕರನ್ ಅಲಿಯಾಸ್ ಕೃಷ್ಣಕುಮಾರ್ ಎನ್ನುವ ವರದಿಗಾರನನ್ನು ಆತನ ಕೊಯಮತ್ತೂರಿನ ನಿವಾಸದಲ್ಲಿ ಬುಧವಾರ ಬೆಳಗ್ಗೆ 5.30 ರ ಸುಮಾರಿಗೆ ಬಂಧಿಸಲಾಗಿದೆ. ವೀರಪ್ಪನ್ ಶಿಕಾರಿ ಪಡೆಯ ವಿಶೇಷ ತನಿಖಾ ಪಡೆಗೆ ಸೇರಿದ ಡಿಎಸ್ಪಿ ದರ್ಜೆಯ ಸಿಐಡಿ ಅಧಿಕಾರಿಯಾಬ್ಬರು ಈ ಬಂಧನ ಕಾರ್ಯದ ನೇತೃತ್ವ ವಹಿಸಿದ್ದರು ಎಂದು ನಕ್ಕೀರನ್ ಮೂಲಗಳು ತಿಳಿಸಿವೆ.
ಪತ್ರಿಕೆಯ ವರದಿಗಾರನ ಬಂಧನಕ್ಕೆ ಸಂಬಂಧಿಸಿದ ವಿಷಯವನ್ನು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಹಾಗೂ ಸುಪ್ರಿಂಕೋರ್ಟ್ಗಳ ಗಮನಕ್ಕೆ ಟೆಲಿಗ್ರಾಂ ಸಂದೇಶದ ಮೂಲಕ ತರಲಾಗಿದೆ ಎಂದು ನಕ್ಕೀರನ್ ಮೂಲಗಳು ತಿಳಿಸಿವೆ.
ಪತ್ರಿಕೆಯ ವರದಿಗಾರ ಮಾತ್ರವಲ್ಲದೆ ಸಂಪಾದಕ ಆರ್.ಆರ್.ಗೋಪಾಲ್ ಅವರ ವಿರುದ್ಧವೂ ಆಪಾದನೆಗಳನ್ನು ಸೃಷ್ಟಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಎಂದು ನಕ್ಕೀರನ್ ಮೂಲಗಳು ಆಪಾದಿಸಿವೆ.
(ಪಿಟಿಐ)
ಮುಖಪುಟ / ವೀರಪ್ಪನ್ ಶಿಕಾರಿ