ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನದಿ ಜೋಡಣೆ ಯೋಜನೆಗೆ ವಂದನ ಶಿವ ವಿರೋಧ

By Staff
|
Google Oneindia Kannada News

ಬೆಂಗಳೂರು: ಗಂಗಾ ಕಾವೇರಿ ನದಿಗಳ ಜೋಡಣೆಯಿಂದ ಪರಿಸರದ ಸಮತೋಲನಕ್ಕೆ ವಿಪರೀತ ಹಾನಿಯಾಗಲಿದೆ ಎಂದು ಖ್ಯಾತ ಪರಿಸರವಾದಿ ವಂದನ ಶಿವ ಅಭಿಪ್ರಾಯಪಟ್ಟಿದ್ದಾರೆ.

ಕೇಂದ್ರ ಸರಕಾರ ರೂಪಿಸಿರುವ ನದೀ ಜೋಡಣೆ ಯೋಜನೆಯನ್ನು ತೀವ್ರವಾಗಿ ಖಂಡಿಸಿದ ವಂದನ ಶಿವ ಅವರು, ವಿಶ್ವ ಆಧ್ಯಾತ್ಮ ಸಮಾವೇಶದಲ್ಲಿ ಭಾನುವಾರ ಮಾತನಾಡುತ್ತಿದ್ದರು. ಜಾಗತೀಕರಣವನ್ನು ವಿರೋಧಿಸಿದ ವಂದನ ಶಿವ ಅವರು, ಅಳಿಯುತ್ತಿರುವ ಮಾನವೀಯ ಮೌಲ್ಯಗಳ ಬಗ್ಗೆ ಕಾಳಜಿ ವ್ಯಕ್ತಪಡಿಸಿದರು.

ಈ ಎಲ್ಲದಕ್ಕೂ ಕಾರಣ ಬಹುರಾಷ್ಟ್ರೀಯ ಕಂಪೆನಿಗಳ ವ್ಯಾಪಾರೀ ಧೋರಣೆ. ಅವು ಪರಿಸರದ ಸೂಕ್ಷ್ಮತೆಯನ್ನು ಹಾನಿಗೊಳಿಸುತ್ತಿವೆ ಎಂದು ವಂದನ ಶಿವ ಆಪಾದಿಸಿದರು. ಆಂಧ್ರಪ್ರದೇಶದಲ್ಲಿ ಮಹಿಳೆಯರ ಸ್ಥಿತಿ ಗತಿಯ ಬಗ್ಗೆ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಆರ್ಟ್‌ ಆಫ್‌ ಲಿವಿಂಗ್‌ನ ಕಾರ್ಯವನ್ನು ಶ್ಲಾಘಿಸಿ ಮಾತನಾಡಿದ ಅವರು, ಭಾರತೀಯ ಸಂಸ್ಕೃತಿಯನ್ನು-ಆಹಾರವನ್ನು ಮಾರಾಟ ಮಾಡುವುದು ಅಪರಾಧ. ಆದರೆ ಈಗ ಕಾಲ ಬದಲಾಗಿದೆ. ಆದರೂ ಸಂಪ್ರದಾಯದ ನೆಲೆಗಟ್ಟಿನಲ್ಲಿ ಯೋಚಿಸುತ್ತಿರುವ ಆರ್ಟ್‌ ಆಪ್‌ ಲಿವಿಂಗ್‌ನ ಕಾರ್ಯ ಶ್ಲಾಘನೀಯ ಎಂದರು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X