ತ್ವರಿತ ಅಲರ್ಟ್ ಗಳಿಗಾಗಿ
For Daily Alerts
‘ಬರ ಪರಿಸ್ಥಿತಿ ನಿಭಾಯಿಸಲಾರದ ಅಧಿಕಾರಗಳು ಮನೆಗೆ’
ಬೆಂಗಳೂರು : ‘ಚಳಿಗಾಲದ ಅಂಚಿನಲ್ಲಿ ಬೇಸಗೆ ಬಿಸಿಯನ್ನು ನೋಡುವ ಕಾಲದಲ್ಲಿ ನಾವು ನಿಂತಿದ್ದೇವೆ. ರಾಜ್ಯದಲ್ಲಿ ಬರ. ಮುಂದಿನ 3 ತಿಂಗಳಲ್ಲಿ ಬರ ಪೀಡಿತ ಜನರಿಗೆ ಅನ್ನ- ನೀರು, ಉದ್ಯೋಗ ಒದಗಿಸುವ ಭಾರೀ ಸವಾಲು ನಮ್ಮ ಮುಂದಿದೆ. ಈ ವಿಷಯದಲ್ಲಿ ಸೋಲುವ ಯಾವ ಅಧಿಕಾರಿಯನ್ನೂ ಸುಮ್ಮನೆ ಬಿಡುವುದಿಲ್ಲ. ಕೆಲಸ ಕದ್ದರೆ ಮನೆಗೆ ಹೋಗುವುದು ಗ್ಯಾರಂಟಿ...’.
ಕಾರ್ಯದರ್ಶಿಗಳು, ವಿಭಾಗೀಯ ಆಯುಕ್ತರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತಿಗಳ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿಗಳು- ಇವೆರೆಲ್ಲ ವರ್ಷದ ಗಳಿಕೆ- ಕಳಕೆ ಕುರಿತು ಚರ್ಚಿಸಲು ಸೇರಿರುವ ಸಮಾವೇಶಕ್ಕೆ ಸೋಮವಾರ ಚಾಲನೆ ಕೊಟ್ಟ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಮಾತುಗಳು ರೈತಮುಖಿ, ಗ್ರಸ್ತಮುಖಿಯಾಗಿದ್ದವು. ಬರಲಿರುವ ದಿನಗಳ ಬಿಗುವನ್ನು ದಿಟ್ಟತನದಿಂದ ಎದುರಿಸುವ ವ್ಯವಸ್ಥಿತ ಸಜ್ಜುಗಾರಿಕೆಯ ಕಳಕಳಿ ಆ ಮಾತುಗಳಲ್ಲಿದ್ದವು.
ಆಂಧ್ರಪ್ರದೇಶದ ಮಾದರಿಯಾಗಲಿ : ಮುಖಪುಟ / ಕೃಷ್ಣಗಾರುಡಿ
Comments
Story first published: Monday, January 20, 2003, 5:30 [IST]