ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಜನವರಿ 31ರಿಂದ ಬಿಜಾಪುರದಲ್ಲಿ ಕೃಷಿ ಆಹಾರ ಮೇಳ
ಬೆಂಗಳೂರು : ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಸಂಘ( ಕಾಸಿಯಾ)ವು ಆರು ದಿನಗಳ ಕೃಷಿ ಆಹಾರ ಮೇಳವನ್ನು ಬಿಜಾಪುರದಲ್ಲಿ ಆಯೋಜಿಸಿದೆ.
ಜ. 31ರಿಂದ ಆರಂಭವಾಗುವ ಈ ಮೇಳ ಬಿಜಾಪುರದ ಸಣ್ಣ ಕೈಗಾರಿಕಾ ಸಂಘದ ಸಹಯೋಗದೊಂದಿಗೆ ನಡೆಯಲಿದೆ. ಈ ಅವಧಿಯಲ್ಲಿ ಹಣ್ಣು, ಹಣ್ಣಿನ ಸಂರಕ್ಷಣೆ, ಸಂಸ್ಕರಣೆ, ಪುಷ್ಪೋದ್ಯಮ, ಕುಕ್ಕುಟ ಉದ್ಯಮ, ಸಾಂಬಾರು ಪದಾರ್ಥಗಳು, ಕೃಷಿ ಸಲಕರಣೆ ಮುಂತಾದ ಉತ್ಪನ್ನಗಳ ಪ್ರದರ್ಶನ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಎನ್. ಜಯಕುಮಾರ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮೇಳವನ್ನು ಕೇಂದ್ರ ಸಚಿವ ಬಸವರಾಜ ಪಾಟೀಲ್ ಯತ್ನಾಳ್ ಉದ್ಘಾಟಿಸುವರು. ಸಣ್ಣ ಕೈಗಾರಿಕೆಗಳ ಅಭಿವೃದ್ಧಿಗಾಗಿ ಗಮನ ಸೆಳೆದು, ಕೃಷಿ ಮತ್ತು ಆಹಾರ ಸಂಬಂಧೀ ಕೈಗಾರಿಕೆಗಳಿಗೆ ಪ್ರಾಮುಖ್ಯತೆ ಕೊಡುವುದು ಈ ಮೇಳದ ಉದ್ದೇಶವಾಗಿದೆ ಎಂದು ಜಯಕುಮಾರ್ ಹೇಳಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...
Comments
Story first published: Thursday, January 16, 2003, 5:30 [IST]