ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋಲಾರದಲ್ಲಿ ರಸ್ತೆಗೆ ತರಕಾರಿ ಸುರಿದು ಪ್ರತಿಭಟನೆ

By Staff
|
Google Oneindia Kannada News

ಕೋಲಾರ : ಸೋಮವಾರ ನಗರದಲ್ಲಿ ರಸ್ತೆಯುದ್ದಕ್ಕೂ ಟ್ರ್ಯಾಕ್ಟರುಗಳಿಂದ ರೈತರು ತರಕಾರಿ ಚೆಲ್ಲಿಕೊಂಡು ಹೋಗುತ್ತಿದ್ದರೆ, ನಾಗರಿಕರು ತರಕಾರಿಯನ್ನು ಬುಟ್ಟಿಗೆ ತುಂಬಿಕೊಳ್ಳುತ್ತಿದ್ದರು. ಇದು ಹತಾಶ ರೈತರ ಪ್ರತಿಭಟನೆಯ ಹೊಸ ಸ್ವರೂಪ.

ಜಿಲ್ಲಾ ರೇಷ್ಮೆ ಬೆಳೆಗಾರರ ಹಿತ ರಕ್ಷಣಾ ವೇದಿಕೆ ಪ್ರತಿಭಟನಾ ಕಾರ್ಯಕ್ರಮ ಆಯೋಜಿಸಿತ್ತು. ಬದನೆಕಾಯಿ, ಆಲೂಗಡ್ಡೆ, ಟೊಮ್ಯಾಟೋ, ಹೂ ಕೋಸು- ಬೆಳೆಗಳನ್ನು ಟ್ರ್ಯಾಕ್ಟರ್‌ಗಳಲ್ಲಿ ತಂದು ನಗರದ ಮೆಕ್ಕೆ ರಸ್ತೆಯಲ್ಲಿ ಸುರಿದ ರೈತರು, ಮಾದರಿ ಟ್ರಾನ್ಸ್‌ಫಾರ್ಮರನ್ನು ಸುಟ್ಟು ಹಾಕಿ ಸರ್ಕಾರದ ಗಮನ ಸೆಳೆಯಲು ಯತ್ನಿಸಿದರು.

ಹೇಳಿದಷ್ಟು ಅವಧಿ ವಿದ್ಯುತ್ತನ್ನು ಪೂರೈಸುತ್ತಿಲ್ಲ. ಹೀಗಾಗಿ ಕೋಟ್ಯಂತರ ರುಪಾಯಿ ಬೆಲೆಯ ಬೆಳೆಗಳು ಹಾಳಾಗುತ್ತಿವೆ. ಜೊತೆಗೆ ಆಲೂಗಡ್ಡೆಗೆ ಬೆಂಬಲ ಬೆಲೆ ಸಿಗದೆ ಲುಕಸಾನಾಗುತ್ತಿದೆ ಎಂಬುದು ರೈತರ ಪ್ರತಿಭಟನೆಯ ಅಜೆಂಡಾಗಳು. ಪ್ರತಿಭಟನೆ ವೇಳೆ ಸ್ಥಳಕ್ಕೆ ಬಂದ ಬೆಸ್ಕಾಂ ಅಧಿಕಾರಿ ಬಸವರಾಜು ಮತ್ತಿತರರನ್ನು ರೈತರು ತರಾಟೆಗೆ ತೆಗೆದುಕೊಂಡರು.

ಪ್ರತಿ ಎಕರೆ ಜಾಗದಲ್ಲಿ ಆಲೂಗಡ್ಡೆ ಬೆಳೆಯಲು ಆಗುತ್ತಿರುವ ಖರ್ಚು 35 ರಿಂದ 40 ಸಾವಿರ ರುಪಾಯಿ. ಧಾರಣೆ ಕುಸಿತದ ಕಾರಣ ಕೈಗೆ ಸಿಗುತ್ತಿರುವ ಬೆಲೆ 25- 26 ಸಾವಿರ ರುಪಾಯಿ ಮಾತ್ರ. ಪ್ರತಿ ಕ್ವಿಂಟಾಲ್‌ ಆಲೂಗಡ್ಡೆಗೆ 600 ರುಪಾಯಿ ಬೆಂಬಲ ಬೆಲೆ ನಿಗದಿ ಮಾಡಿ, ಖರೀದಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು.

(ಇನ್ಫೋ ವಾರ್ತೆ)

ಪೂರಕ ಓದಿಗೆ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X