ಘಾಟ್ನಂದೂರ್ ಬಳಿ ರೈಲು ಅಪಘಾತ : 10 ಸಾವು
ಹೈದರಾಬಾದ್ : ಶುಕ್ರವಾರ ಮುಂಜಾನೆ ಮಹಾರಾಷ್ಟ್ರದ ಘಾಟ್ನಂದೂರ್ ರೇಲ್ವೆ ನಿಲ್ದಾಣದ ಬಳಿ ಗೂಡ್ಸೊಂದಕ್ಕೆ ಡಿಕ್ಕಿ ಹೊಡೆದ ಕಾರಣ ಸಿಕಂದರಾಬಾದ್- ಮನ್ಮದ್ ಎಕ್ಸ್ಪ್ರೆಸ್ ರೈಲಿನ ನಾಲ್ಕು ಭೋಗಿಗಳು ಹಳಿ ತಪ್ಪಿದ್ದು, 10 ಮಂದಿ ಸತ್ತಿದ್ದಾರೆ.
ದಕ್ಷಿಣ ರೈಲ್ವೆ ಅಧಿಕಾರಿಗಳು ಈ ವಿಷಯವನ್ನು ಸ್ಪಷ್ಟಪಡಿಸಿದ್ದು, ಸುಮಾರು 15 ಮಂದಿಗೆ ಗಾಯಗಳಾಗಿವೆ. ಮೃತರ ಪೈಕಿ ಮಹೇಶ್ (35), ಎಸ್.ಬಿ.ಕಾಂಬ್ಳಿ, ವಾಘ್ಮೕರ್ ವಿನೋದ್ಕರ್ ಹಾಗೂ ದತ್ತಾತ್ರೇಯ ಎಂಬ ನಾಲ್ವರನ್ನು ಗುರುತಿಸಲಾಗಿದೆ. ಇವರ ಊರಿನ ವಿವರಗಳು ಪ್ರಕಟವಾಗಿಲ್ಲ.
ರೈಲುಗಳಿಗೆ ಹಸಿರು ನಿಶಾನೆ ತೋರುವ ಸಿಬ್ಬಂದಿಯ ಅಚಾತುರ್ಯದಿಂದ ಈ ಅವಘಡ ಸಂಭವಿಸಿದೆ ಎಂದು ರೈಲ್ವೆ ಸಚಿವ ನಿತಿಶ್ ಕುಮಾರ್ ಹೇಳಿದ್ದಾರೆ. ಚಲಿಸುತ್ತಿರುವ ರೈಲಿನ ಹಳಿ ಮೇಲೆಯೇ ಗೂಡ್ಸ್ ಕೂಡ ಬರುತ್ತಿರುವುದನ್ನು ಕಂಡ ಚಾಲಕ ತುರ್ತು ಬ್ರೇಕುಗಳನ್ನು ಹಾಕುವುದರ ಮೂಲಕ ದೊಡ್ಡ ಅಪಘಾತವನ್ನು ತಪ್ಪಿಸಿದ್ದಾರೆ. ಆದರೆ ನಾಲ್ಕು ಭೋಗಿಗಳು ಹಳಿ ತಪ್ಪುವುದನ್ನು ನಿಯಂತ್ರಿಸುವುದು ಸಾಧ್ಯವಾಗಲಿಲ್ಲ.
ಡಿಸೆಂಬರ್ 21, 2002ರಂದು ಕಾಚಿಗುಡ- ಬೆಂಗಳೂರು ಎಕ್ಸ್ಪ್ರೆಸ್ ರೈಲು ಆಂಧ್ರಪ್ರದೇಶದ ಪಗಡಿರೈ ರೈಲು ನಿಲ್ದಾಣದ ಬಳಿ ಹಳಿ ತಪ್ಪಿ ಮುಖಪುಟ / ಇವತ್ತು... ಈ ಹೊತ್ತು...