ವಿಜ್ಞಾನ ಮೇಳ : ಬೆಂಗಳೂರಲ್ಲಿ ಭಾರತ ಸರ್ಕಾರ !
ಬೆಂಗಳೂರು : 90ನೇ ಅಖಿಲ ಭಾರತ ವಿಜ್ಞಾನ ಮೇಳವನ್ನು ನಗರದಲ್ಲಿ ಶುಕ್ರವಾರ ಪ್ರಧಾನಿ ಎ.ಬಿ.ವಾಜಪೇಯಿ ಬೆಂಗಳೂರು ವಿಶ್ವವಿದ್ಯಾಲಯ ‘ಜ್ಞಾನಭಾರತಿ’ಯ ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಉದ್ಘಾಟಿಸಲಿದ್ದಾರೆ.
ದೇಶ ವಿದೇಶಗಳ ವಿಜ್ಞಾನಿಗಳು, ಉದ್ದಿಮೆದಾರರು, ತಂತ್ರಜ್ಞರು, ನೀತಿ ನಿರೂಪಕರು ಹಾಗೂ ವಿಜ್ಞಾನಾಸಕ್ತ ಜನ ಭಾಗವಹಿಸಲಿರುವ ಮೇಳ 5 ದಿನಗಳ ಕಾಲ ನಡೆಯಲಿದೆ. ವಿದೇಶದ 80 ವಿಜ್ಞಾನಿಗಳೂ ಸೇರಿದಂತೆ 5000ಕ್ಕೂ ಹೆಚ್ಚು ಪ್ರತಿನಿಧಿಗಳು ಮೇಳದಲ್ಲಿ ಪಾಲ್ಗೊಳ್ಳುವರು. ಭಾರತೀಯ ವಿಜ್ಞಾನ ಮೇಳ ಒಕ್ಕೂಟ ಆಯೋಜಿಸಿರುವ ಮೇಳದ ಆತಿಥ್ಯದ ಜವಾಬ್ದಾರಿಯನ್ನು ಇಸ್ರೋ ಮತ್ತು ಬೆಂಗಳೂರು ವಿಶ್ವವಿದ್ಯಾಲಯ ವಹಿಸಿಕೊಂಡಿವೆ.
ಅಮೆರಿಕ, ಜರ್ಮನಿ, ಫ್ರಾನ್ಸ್, ರಷ್ಯಾ ಸೇರಿದಂತೆ 11 ದೇಶಗಳ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಳು ಮೇಳದಲ್ಲಿ ಸೇರಲಿದ್ದು, ಬಾಹ್ಯಾಕಾಶ ತಂತ್ರಜ್ಞಾನದ ಭವಿಷ್ಯ ಹಾಗೂ ಅದರ ಉಪಯೋಗಗಳನ್ನು ಚರ್ಚಿಸಲಿವೆ. ವಿವಿಧ ವಿಶ್ವ ವಿದ್ಯಾಲಯಗಳ ಕುಲ ಸಚಿವರು ಈ ಚರ್ಚೆಯಲ್ಲಿ ಭಾಗವಹಿಸುತ್ತಿದ್ದು, ಶಿಕ್ಷಣದಲ್ಲಿ ಬಾಹ್ಯಾಕಾಶ ತಂತ್ರಜ್ಞಾನದ ಬಳಕೆ ಕುರಿತು ಮಾತುಕತೆ ನಡೆಯಲಿದೆ ಎಂದು ಇಸ್ರೋ ಅಧ್ಯಕ್ಷ ಕೆ.ಕಸ್ತೂರಿ ರಂಗನ್ ಹೇಳಿದರು.
ಕಲಾಂ ತಾತ ಕೂಡ ಬರ್ತಾರೆ : ಇನ್ಸಾಟ್ ಉಪಗ್ರಹದ ಮೂಲಕ ರಾಷ್ಟ್ರಪತಿ ಭವನದಿಂದಲೇ ಮೇಳದ ‘ಬಾಹ್ಯಾಕಾಶ ಸಮ್ಮಿತ್’ ಕುರಿತು ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂ ಸಂದೇಶ ಕಳುಹಿಸಬೇಕು ಅಂತ ತೀರ್ಮಾನವಾಗಿತ್ತು. ಜನವರಿ 4ನೇ ತಾರೀಕು ಮೇಳದ ಪ್ರಮುಖ ಆಕರ್ಷಣೆ ಇದು. ಬಾಹ್ಯಾಕಾಶ ವಿಜ್ಞಾನ ತಮ್ಮ ಹೃದಯಕ್ಕೆ ತೀರಾ ಹತ್ತಿರವಾದ ವಿಷಯವಾದ್ದರಿಂದ ಕಲಾಂ ಖುದ್ದು ಬೆಂಗಳೂರಿಗೆ ಬಂದು ಚರ್ಚೆಯಲ್ಲಿ ಕುಳಿತುಕೊಳ್ಳಲು ಹಠಾತ್ತನೆ ನಿರ್ಧರಿಸಿದ್ದಾರೆ.
ವೈಜ್ಞಾನಿಕ ಸಂಶೋಧನೆಗಳತ್ತ ಒಲವು ಹರಿಸುವುದು ಕಡಿಮೆಯಾಗುತ್ತಿರುವ ಈಚಿನ ದಿನಗಳಲ್ಲಿ ವಿದ್ಯಾರ್ಥಿಗಳ ಮನಸ್ಸನ್ನು ಇತ್ತ ಆಕರ್ಷಿಸುವುದು ಹೇಗೆ ಎಂಬ ಚರ್ಚೆ ಕೂಡ ಮೇಳದಲ್ಲಿ ನಡೆಯಲಿದೆ. ಜೀನುಗಳ ಸಂಶೋಧನೆ, ಜೈವಿಕ ವಿಜ್ಞಾನಗಳು, ನ್ಯಾನೋ ವಿಜ್ಞಾನಗಳು, ಮಾಹಿತಿ ವಿಜ್ಞಾನ, ಆಹಾರ- ಪೌಷ್ಟಿಕಾಂಶ- ಪರಿಸರ ಸಂರಕ್ಷಣೆ ವಿಷಯದಲ್ಲಿ 21ನೇ ಶತಮಾನದ ಸವಾಲುಗಳು ಹಾಗೂ ವೈದ್ಯಕೀಯ ವಿಜ್ಞಾನ ಕುರಿತ ವಿವಿಧ ಚರ್ಚೆಗಳು ಮೇಳದಲ್ಲಿ ನಡೆಯಲಿವೆ.
ದೇಶದ ವೈಜ್ಞಾನಿಕ ಸಾಧನೆಗಳನ್ನು ಬಿಂಬಿಸುವ ್ಙಖ್ಚಜಿಛ್ಞ್ಚಿಛಿ ಉ್ಡಟಟ2003ಕ್ಟಜಿಛಛಿ ಟ್ಛ ಐ್ಞಛಜಿಚ್ಙ ಮೇಳದ ಪ್ರಮುಖ ಆಕರ್ಷಣೆಯಾಗಿದೆ.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...