ತ್ವರಿತ ಅಲರ್ಟ್ ಗಳಿಗಾಗಿ
For Daily Alerts
2003 ರಲೂ ಕೃಷ್ಣರಿಗೆ ಯಮಗಂಡಕಾಲ- ಜ್ಯೋತಿಷಿ
ಬೆಂಗಳೂರು : 2002 ನೇ ಇಸವಿಯಲ್ಲಿ ಕಷ್ಟ ಕೋಟಲೆಗಳ ಸರಮಾಲೆಯನ್ನೇ ಎದುರಿಸಿದ ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಅವರಿಗೆ 2003 ನೇ ವರ್ಷದಲ್ಲೂ ಸಾಲು ಸಾಲು ಸಮಸ್ಯೆಗಳು ಕಾದಿವೆ ಎಂದು ಜ್ಯೋತಿಷಿಯಾಬ್ಬರು ಹೇಳಿದ್ದಾರೆ.
ನೂತನ ವರ್ಷದ ಸಂದರ್ಭದಲ್ಲಿ ಭಾರತೀಯ ವಿದ್ಯಾಭವನ ಏರ್ಪಡಿಸಿದ್ದ ಹೊಸ ವರ್ಷದ ಭವಿಷ್ಯ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಖ್ಯಾತ ಜ್ಯೋತಿಷಿ ಗಾಯತ್ರಿದೇವಿ ವಾಸುದೇವ್ ಅವರು ಕೃಷ್ಣ ಅವರ ಸಮಸ್ಯೆಗಳ ಸುಳಿ ಇನ್ನೂ ಆಳವಾಗಿರುವ ಮುನ್ನೆಚ್ಚರಿಕೆ ನೀಡಿದರು.
ಭವಿಷ್ಯವಾಣಿ
ಮುಖ್ಯಾಂಶಗಳು
:
- 2003 ರಲ್ಲೂ ಕೃಷ್ಣ ಅವರು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಹಾಗೂ ಅನೇಕ ನಿದ್ರಾ ರಹಿತ ರಾತ್ರಿಗಳನ್ನು ಕಳೆಯಬೇಕಾಗುತ್ತದೆ.
- ಜನತಾದಳ ಹಾಗೂ ಕಮ್ಯುನಿಸ್ಟ್ ಪಕ್ಷಗಳು ಇನ್ನಷ್ಟು ಬಲಹೀನಗೊಳ್ಳಲಿವೆ.
- ಬಿಜೆಪಿ ಪಕ್ಷದೊಳಗೆ ಆಂತರಿಕ ಸಮಸ್ಯೆಗಳು ಕಾಣಿಸಿಕೊಳ್ಳಲಿದ್ದು , ಈ ಸಮಸ್ಯೆಗಳಿಂದ ಪಕ್ಷ ಮುಜುಗರ ಎದುರಿಸಬೇಕಾಗುವುದು.
- ದೇಶದ ರಾಜಕೀಯವೂ ಸ್ಥಿತ್ಯಂತರಗಳಿಂದ ಕೂಡಿದ್ದು , ರಾಜಕಾರಣಿಗಳು ಅಧಿಕ ಒತ್ತಡ ಎದುರಿಸಬೇಕುಗುತ್ತದೆ. ಲೋಕಸಭೆಗೆ ಮಧ್ಯಂತರ ಚುನಾವಣೆ ನಡೆಯುವ ಸಾಧ್ಯತೆಯೂ ಇದೆ.
- ಕೋಮು ದಳ್ಳುರಿ ಮುಂದುವರಿದರೂ, ಹಿಂಸೆಯ ಪ್ರಮಾಣ ಕಡಿಮೆಯಿರುತ್ತದೆ.
- ಅಯೋಧ್ಯೆ ಸಮಸ್ಯೆ ಇತ್ಯರ್ಥವಾಗುವ ಸಂಭವವಿದೆ.
- ಗುಜರಾತ್ನಲ್ಲಿ ಶಾಂತಿ ನೆಲೆಸಲಿದೆ.
- ಭಾರತದ ಮೇಲೆ ಪಾಕಿಸ್ತಾನ ದಾಳಿ ನಡೆಸಬಹುದು.
- ಬರಹಗಾರರು, ಪತ್ರಿಕೋದ್ಯಮದ ಮಂದಿ ಹಾಗೂ ಕ್ರೀಡಾಪಟುಗಳಿಗೆ ಉತ್ತಮವಾದ ವರ್ಷ. ಅಂತರರಾಷ್ಟ್ರೀಯ ಮನ್ನಣೆಯೂ ಸಾಧ್ಯ.
ಮುಖಪುಟ / ಕೃಷ್ಣಗಾರುಡಿ
Comments
Story first published: Wednesday, January 1, 2003, 5:30 [IST]