ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ, ಸರ್ವಧರ್ಮ ಮೇಳ
ಧರ್ಮಸ್ಥಳ: ನವಂಬರ್ 29 ರ ಶುಕ್ರವಾದಿಂದ ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವ ಪ್ರಾರಂಭವಾಗಿದ್ದು , ಡಿಸೆಂಬರ್ 4 ರವರೆಗೆ ವಿವಿಧ ಸಾಹಿತ್ಯಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಡಿ.2 ಮತ್ತು 3 ರಂದು ಸರ್ವ ಧರ್ಮ ಸಮ್ಮೇಳನ, ವಸ್ತು ಪ್ರದರ್ಶನ ಹಾಗೂ ಸಾಹಿತ್ಯ ಸಮ್ಮೇಳನ ನಡೆಯಲಿವೆ. ಅಂತರರಾಷ್ಟ್ರೀಯ ಖ್ಯಾತಿಯ ರವಿಶಂಕರ್ ಗುರೂಜಿ ಅವರು ಸರ್ವ ಧರ್ಮ ಸಮ್ಮೇಳನ ಮೇಳದ ಅಧ್ಯಕ್ಷತೆ ವಹಿಸುವರು.
ಇದು 70ನೆಯ ಸರ್ವಧರ್ಮ ಹಾಗೂ ಸಾಹಿತ್ಯ ಸಮ್ಮೇಳನ. ಬೆಂಗಳೂರಿನ ಭಾರತೀಯ ವಿದ್ಯಾಭವನದ ಅಧ್ಯಕ್ಷ ಎನ್. ರಾಮಾನುಜಂ ಅವರು ಮೇಳವನ್ನು ಉದ್ಘಾಟಿಸುವರು. ರವಿಶಂಕರ್ ಅವರು ವೇದ ವಿಜ್ಞಾನ ಮಹಾ ವಿದ್ಯಾಪೀಠ ಹಾಗೂ ವ್ಯಕ್ತಿ ವಿಕಾಸ ಕೇಂದ್ರದ ಸ್ಥಾಪಕರಾಗಿದ್ದು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.
ಸಮ್ಮೇಳನದಲ್ಲಿ ಕ್ರೆೃಸ್ತ ಅಧ್ಯಯನ ಪೀಠದ ಮುಖ್ಯಸ್ಥ ಫಾ. ಜಾನ್ ಫರ್ನಾಂಡಿಸ್, ಗುಲ್ಬರ್ಗಾ ವಿವಿ ಸೊಂಡೂರು ಸ್ನಾತಕೋತ್ತರ ಕೇಂದ್ರದ ಪ್ರಾಧ್ಯಾಪಕ ಡಾ. ಶಾಂತಿನಾಥ ದಿಬ್ಬದ ಹಾಗೂ ಬೆಂಗಳೂರಿನ ಟಿಪ್ಪು ಸುಲ್ತಾನ್ ಉನ್ನತ ಸಂಶೋಧನ ಕೇಂದ್ರದ ಪ್ರಧಾನ ಕಾರ್ಯದರ್ಶಿ ಜನರಲ್ ಅಬ್ದುಲ್ ರೆಹಮಾನ್ ಕಮರುದ್ದೀನ್ ಅವರು ಭಾಗವಹಿಸುವರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...